July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜಾರಿಗೆಬೈಲು ಬದ್ರ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬೂಬಕ್ಕರ್, ಕಾರ್ಯದರ್ಶಿಯಾಗಿ ಹಾರಿಶ್ ಆಯ್ಕೆ

ಬೆಳ್ತಂಗಡಿ : ಜಾರಿಗೆಬೈಲು ಬದ್ರ್ ಜುಮ್ಮಾ ಮಸೀದಿಯ ಮಹಾಸಭೆಯು ಜು.25 ರಂದು ಮಸೀದಿಯಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ದೇಶನದಂತೆ ಮರ್ಹೂಮ್ ಕೂರತ್ ತಂಙಳ್ ಸುಪುತ್ರ ಅಸ್ಸಯ್ಯದ್ ಮಸ್ ಹೂದ್ ಅಲ್-ಬುಖಾರಿ ಅಲ್ ಅಝ್ಹರಿ ತಂಙಳ್ ಗೌರವಾದ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುದರ್ರಿಸ್ ಯಾಸಿನ್ ಸಖಾಫಿ ಅಲ್ ಹಿಕಮಿ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಶ್ ಕುಕ್ಕುಡಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಮುಂದಿನ ಮೂರು ವರ್ಷದ ಅವಧಿಗೆ ಹೊಸ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬೂಬಕ್ಕರ್ ಕಜೆಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಶ್ ಕುಕ್ಕುಡಿ, ಕೋಶಾಧಿಕಾರಿಯಾಗಿ ಉದ್ಯಮಿ ಸಂಶುದ್ದೀನ್ ಜೆ, ಉಪಾಧ್ಯಕ್ಷರುಗಳಾಗಿ ಹಾಜಿ ಇಸ್ಮಾಯಿಲ್ ಪರಿಮ, ಮಹಮ್ಮದ್ ಗೋವಿಂದೂರು ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ನಡತ್ತೊಟ್ಟು, ಎನ್ ರಫೀಕ್, ಸದಸ್ಯರುಗಳಾಗಿ ಎನ್ ರಫೀಕ್ ಮುಸ್ಲಿಯಾರ್, ಹಾಫಿಳ್ ಅಬ್ದುಲ್ ಲತೀಫ್, ಹಾಜಿ ಅಬೂಬಕ್ಕರ್ ಪಳ್ಳಾದೆ, ಎಂ ಬಿ ಝಕರಿಯ ಮುಸ್ಲಿಯಾರ್, ಕಾಸಿಂ ನಾಳ, ಅಬ್ದುಲ್ ಕರೀಮ್ ನಾಳ, ಇಸ್ಮಾಯಿಲ್ ಎಲ್ತ್ರಡ್ಕ,ಕೆ.ಎಸ್.ಅಬ್ದುಲ್ ರಹಿಮಾನ್ ಕುಕ್ಕುಡಿ, ಮಹಮ್ಮದ್ ಕುಕ್ಕುಡಿ, ಉಮ್ಮರ್ ಕುಂಙಿ ಮೈಲಿಗಲ್ಲು,ಆದಂ ಮುಂಚಳಿಕೆ, ಇಕ್ಬಾಲ್ ಪೈಂಟರ್,ಹೈದರ್ ಎಲ್ತ್ರಡ್ಕ, ಉಮ್ಮರ್ ಪಳ್ಳಾದೆ ಆಯ್ಕೆ ಯಾದರು.

Related posts

ಕ್ಯಾಂಪ್ಕೊ “ಸಾಂತ್ವನ” ಧನಸಹಾಯ ಹಸ್ತಾಂತರ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ – ಚಿಣ್ಣರ ಚಿತ್ರೋತ್ಸವ’ ಚಿತ್ರಕಲೆ ಸ್ಪರ್ಧೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya

ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಧರ್ಮಸ್ಥಳಕ್ಕೆ ಭೇಟಿ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಬಾಲಕಿಯರು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ತ್ರೋಬಾಲ್ ತಂಡಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ವಿತರಣೆ

Suddi Udaya
error: Content is protected !!