ಬಳಂಜ: ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಬಳಂಜ ವಲಯದ ನಾಲ್ಕೂರು ಕಾರ್ಯಕ್ಷೇತ್ರದ ಚೈತನ್ಯ ಜ್ಞಾನವಿಕಾಸ ಸಂಘದ ವಾರಿಜ ಇವರಿಗೆ ಮಂಜೂರಾದ ಕಾಮೋಡ್ ಚೇರ್ ನ್ನು ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಗಿರೀಶ್ ಎನ್, ಬಳಂಜ ವಲಯ ಮೇಲ್ವಿಚಾರಕರಾದ ಪದ್ಮಾವತಿ, ನಾಲ್ಕೂರು ಸೇವಾಪ್ರತಿನಿಧಿ ಸರಸ್ವತಿ ಉಪಸ್ಥಿತರಿದ್ದರು.











