ಬೆಳ್ತಂಗಡಿ : ಅಗಸ್ಟ್ 10 ರಿಂದ 12ನೇ ತಾರೀಖಿನವರೆಗೆ ಬೆಳ್ತಂಗಡಿ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯುವ ಶ್ರೀ ಗುರುರಾಯರ 354ನೇ ಆರಾಧನ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಶ್ರೀಮಠದಲ್ಲಿ ನಡೆಯಿತು.
ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿ ಸರ್ವರ ಸಹಕಾರವನ್ನು ಕೋರಿ ಆ.11ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಡಾ ಬಿ ಎ ಕುಮಾರ ಹೆಗ್ಡೆ ಅವರು ಕಾರ್ಯಕ್ರಮದ ವಿವರಣೆಯನ್ನು ನೀಡಿ ಯಶಸ್ವಿಯಾಗಿ ನಡೆಯುವಂತೆ ಸಲಹೆಗಳನ್ನು ನೀಡಿದರು. ಉಪಾಧ್ಯಕ್ಷ ವಿ ಆರ್ ನಾಯಕ್, ಸೋಮೇಗೌಡ, ಮಂಜುನಾಥ ರೈ, ಶ್ರೀಮತಿ ಸುಜಿತಾ ವಿ ಬಂಗೇರ, ಶ್ರೀಮತಿ ಸುಶೀಲಾ ಎಸ್ ಹೆಗ್ಡೆ, ಕೃಷ್ಣ ಶೆಟ್ಟಿ, ಬಂಗಾರು, ರಾಜೇಶ್ ಶೆಟ್ಟಿ ಲಾಯಿಲ, ಶ್ರೀಮತಿ ಸೌಮ್ಯ ಲಾಯಿಲ, ವಿಜಯಕುಮಾರ್ ಶ್ರೀಮತಿ ಕುಸುಮಾವತಿ ಉಪಸ್ಥಿತರಿದ್ದರು. ವಸಂತ ಸುವರ್ಣ ಸ್ವಾಗತಿಸಿ, ಪ್ರೊ. ಎ ಕೃಷ್ಣಪ್ಪ ಪೂಜಾರಿ ವಂದಿಸಿದರು.











