ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಡಿಕೆ ವರ್ತಕರ ಜಿಲ್ಲಾ ಸಂಘಟನೆಗೆ ಪೂರ್ವಭಾವಿ ಸಭೆ ಬೆಳ್ತಂಗಡಿ ಎಪಿಎಂಸಿ ಪ್ರಾಂಗಣದಲ್ಲಿ ನಡೆಯಿತು.

ವರ್ತಕರ ಜಿಲ್ಲಾ ಸಂಘದ ಮುಖಂಡ ಪ್ರಶಾಂತ್ ಶೆಟ್ಟಿ ಮಡಂತ್ಯಾರು ಮಾತನಾಡಿ, ಇಲಾಖೆಗಳ ಕಾನೂನು ಚೌಕಟ್ಟು ಮೀರಿದ ಕ್ರಮಗಳಿಗೆ ಭಯ ಪಡುವ ಅಗತ್ಯವಿಲ್ಲ ಮತ್ತು ವ್ಯವಸ್ಥೆಯಲ್ಲಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಂಘಟಿತವಾಗಿ ಪ್ರಶ್ನೆ ಮಾಡೋಣ ಎಂದರು.
ಜಿಲ್ಲಾ ಮುಂದಾಳು ರೂಪೇಶ್ ರೈ, ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಸವಣಾಲು ಭಾಗವಹಿಸಿದ್ದರು.
ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಹೇಮಾಶಂಕರ ಶೆಟ್ಟಿ , ಕಾರ್ಯದರ್ಶಿಯಾಗಿ ಸಂಶುದ್ದೀನ್ ಜಾರಿಗೆಬೈಲ್ , ಕೋಶಾಧಿಕಾರಿಯಾಗಿ ಶರತ್ ಮಡಂತ್ಯಾರು, ಉಪಾಧ್ಯಕ್ಷರಾಗಿ ನೀಲೇಶ್ ಕುಮಾರ್ ಪಟೇಲ್ ಮತ್ತು ಅಶ್ರಫ್ ಎಂ.ಹೆಚ್. ಹಾಗೂ ಜತೆ ಕಾರ್ಯದರ್ಶಿಯಾಗಿ ಯಾಕುಬ್ ಎಂ.ಪಿ. ಉರುವಾಲು ಪದವು ಮತ್ತು ಹಕೀಂ ಆಯ್ಕೆಗೊಂಡರು.
ಸುದೀಪ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿರು.











