ಬೆಳ್ತಂಗಡಿ:ರೇಷ್ಮೆರೋಡ್ ಪೆಟ್ರೋಲ್ ಪಂಪ್ ನಲ್ಲಿ ಡಿಸಿಲ್ , ಪೆಟ್ರೋಲ್, ಹಾಕಿದ ವಾಹನಗಳು ಅರ್ಧದಲ್ಲಿ ನಿಲ್ಲುತ್ತಿದೆ ಎಂದು ಆರೋಪಿಸಿ ಆಟೋ ಚಾಲಕರು ಪೋಲೀಸರಿಗೆ ದೂರು ನೀಡಿದ ಘಟನೆ ಇಂದು ನಡೆದಿದೆ.

ಪೆಟ್ರೋಲ್ ಗೆ ಡಿಸೇಲ್ ಹಾಗೂ ಡೀಸೆಲ್ ಗೆ ಪೆಟ್ರೋಲಿಯಂ ಸಮಪ೯ಕವಾಗಿಲ್ಲ ಎಂದು ರಿಕ್ಷಾ ಚಾಲಕರು ಆರೋಪಿಸಿದ್ದಾರೆ .
ಇಲ್ಲಿ ಪ್ಯೂಲ್ ತುಂಬಿಸಿ ಹೋದಾಗ ಆಟೋಗಳು ದಾರಿ ಮಧ್ಯೆ ಬಾಕಿಯಾಗುತ್ತಿತ್ತು. ರಿಕ್ಷಾದಲ್ಲಿ ಸಮಸ್ಯೆ ಇರಬಹುದೆಂದು ಗ್ಯಾರೇಜ್ ನಲ್ಲಿ ಸರಿಪಡಿಸಿ ಮತ್ತೆ ಫ್ಯೂಲ್ ತುಂಬಿಸಿ ಓಡಾಟ ನಡೆಸಿದಾಗ ಸಮಸ್ತೆ ಮತ್ತೆ ಮುಂದುವರಿದೆ. ನಂತರ ರಿಕ್ಷಾದ ಟ್ಯಾಂಕ್ ಪರಿಶೀಲಿಸಿದಾಗ ಇದು ಗೊತ್ತಾಗಿದೆ ಈ ಬಗ್ಗೆ ಬೆಳ್ತಂಗಡಿ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ರಿಕ್ಷಾಚಾಲಕರಾದ ವಸಂತ ಶೆಟ್ಟಿ ಗೆರುಕಟ್ಟೆ ಮಾಹಿತಿ ನೀಡಿದ್ದಾರೆ.











