
ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬದ್ಯಾರ್ನಿಂದ ಕುಂಡದಬೆಟ್ಟುವರೆಗೆ ಹಾದು ಹೋಗುವ ಗುರುವಾಯನಕೆರೆ ಮೂಡಬಿದ್ರೆ, ಮುಲ್ಕಿ, ರಾಜ್ಯ ಹೆದ್ದಾರಿಯ ರನ್ನಾಡಿಪಲ್ಕೆ , ಕನ್ನಡಿಕಟ್ಟೆ, ಪೆರಣಮಂಜ ಮತ್ತು ಅಚ್ಚಿನ್ ಎಂಬಲ್ಲಿ ಬೃಹತ್ ಗಾತ್ರದ ಹೊಂಡಗಳಿಂದಾಗಿ ಸಾರ್ವಜನಿಕರು, ವಾಹನ ಓಡಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಪಡಂಗಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಜು. 21 ರಂದು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದ್ದು

ಅದರಂತೆ ಮನವಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ಇವರು ಹೊಂಡಗಳನ್ನು ಮುಚ್ಚಿ ಸಾರ್ವಜನಿಕ ಮನವಿಗೆ ಸ್ಪಂದಿಸಿದರು.











