ಮಡಂತ್ಯಾರ್: ಜೆಸಿಐ ಮಡಂತ್ಯಾರ್ ಜೇನುಗೂಡು – 2025 ರ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ಸುದ್ದಿ ಉದಯ ವಾರಪತ್ರಿಕೆ ಬೆಳ್ತಂಗಡಿ ಇದರ ವ್ಯವಸ್ಥಾಪಕ ನಿರ್ದೇಶಕರಾದ ತುಕಾರಾಂ ಬಿ ಯ ವರಿಗೆ ಆ 2 ರಂದು ಮಡಂತ್ಯಾರ್ ಕ್ಷೀರರಬುಂದಿ ಸಭಾವನದಲ್ಲಿ ನಡೆದ ಆಟಿದ ಸಂಭ್ರಮ ಮತ್ತು ಧನ್ಯೋಸ್ಮಿ ಕಾರ್ಯಕ್ರಮದಲ್ಲಿ ನೀಡಿ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ವಲಯ ಉಪಾಧ್ಯಕ್ಷರಾದ JFM ರಂಜಿತ್ ಎಚ್ ಡಿ, ವಲಯ ಬ್ಯುಸಿನೆಸ್ ನಿರ್ದೇಶಕರಾದ HGF ಅಶೋಕ್ ಗುಂಡಿಯಲ್ಕೆ, ವಲಯ ಬ್ಯುಸಿನೆಸ್ ನ ಸಂಯೋಜಕರಾದ HGF ವಿಕೇಶ್ ಮಾನ್ಯ, ಜೆಸಿಐ ಮಡಂತ್ಯಾರ್ ನ ಅಧ್ಯಕ್ಷೆ HGF ಅಮಿತ ಅಶೋಕ್, ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಿಳಾ ಮಂಡಲ ಮಡಂತ್ಯಾರಿನ ಅಧ್ಯಕ್ಷರಾದ ಶ್ರೀಮತಿ ಲೂಸಿ ಕಾರ್ಲೊ, ಜೆಸಿಐ ಮಡಂತ್ಯಾರಿನ ಪೂರ್ವಧ್ಯಕ್ಷರಾದ ಜಯಂತ್ ಶೆಟ್ಟಿ,ಪ್ರಶಾಂತ್ ಕಂಡೆತ್ಯಾರ್, ನಮ್ಮೂರಿನ ಸಾಧಕ ಯೋಗೀಶ್ ಕಡ್ತಿಲ,JCI ಕಾರ್ಯದರ್ಶಿ ಆದರ್ಶ ಹಟ್ಟತ್ತೊಡಿ,JJC ಅಧ್ಯಕ್ಷ ಜೀವಿತ್ ವಿ ಪೂಜಾರಿ, ಆಟಿದ ಕಾರ್ಯಕ್ರಮ ಸಂಯೋಜಕ ಸಂಯುಕ್ತ ಕಡ್ತಿಲ, ಮಡಂತ್ಯಾರ್ ಜೆಸಿಐ ಘಟಕದ ಸದಸ್ಯರು,ಮಹಿಳಾ ಮಂಡಲ ಸದಸ್ಯರುಗಳು ಉಪಸ್ಥಿತರಿದ್ದರು.











