September 6, 2026
ಅಪರಾಧ ಸುದ್ದಿಪೊಲೀಸ್ಪ್ರಮುಖ ಸುದ್ದಿ

ಭಗವಾನ್ ಶ್ರೀ ಕೃಷ್ಣನಿಗೆ ಅಪಹಾಸ್ಯ ಮಾಡಿದವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಶ್ರೀ ಕೃಷ್ಣನ ವೇಷಧಾರಿಯಾದ ‘ರವಿ ರಾಮಕುಂಜ’ ಎಂಬವರು ಹಿಂದೂಗಳ ಆರಾಧ್ಯ ದೇವರಾದ ಶ್ರೀ ಕೃಷ್ಣ ಪರಮಾತ್ಮನ ವೇಷಧರಿಸಿಕೊಂಡು ಅಶ್ಲೀಲ ಭಂಗಿ ಮತ್ತು ಅಶ್ಲೀಲ ಪದ ಕೊಳಲು ಊದುವಾಗ ಶ್ರೀ ಕೃಷ್ಣನ ಇನ್ನೊಂದು ಹೆಸರಾದ ಮುರಾರಿ ಬಗ್ಗೆ ‘ಆಯೆ ಸೈತೆ’ ಅಲ್ಲದೆ ಕೃಷ್ಣ ವೇಶಧಾರಿ ಹಾಲಿಂಗನ ಮಾಡುವುದು ಅಸಂಬದ್ಧ ಶಬ್ದಗಳೊಂದಿಗೆ ಅನಾಗರಿಕವಾಗಿ ನಟಿಸಿ, ವರ್ತಿಸಿದ್ದು ಇದು ಹಿಂದುಗಳ ಧಾರ್ಮಿಕ ಭಾವನೆಗೆ ತೀವ್ರಗಾಸಿ ಉಂಟುಮಾಡುತ್ತದೆ.


ಧಾರ್ಮಿಕ ನಂಬಿಕೆ ಮತ್ತು ಆರಾಧನೆಗೆ ಧಕ್ಕೆಯಾಗದಂತೆ ಕಾನೂನಿನಲ್ಲಿ ಉಲ್ಲೇಖವಿದ್ದರೂ ಈ ರೀತಿಯ ಘಟನೆಗಳು ಮರುಕಳಿಸುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿ ಸಮುದಾಯದ ಒಳಗೆ ಗಲಭೆಗಳು ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ತಾವುಗಳು ಸದ್ರಿ ಕಲಾವಿದ ರವಿ ರಾಮಕುಂಜ’ ಮತ್ತು ನಿರ್ದೇಶಕ ಪುಷ್ಪರಾಜ್’ ಹಾಗೂ ಕಾರ್ಯಕ್ರಮದ ಆಯೋಜಕರಾದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.


ಈ ಸಂದರ್ಭದಲ್ಲಿ ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಉದಯ ಕುಮಾರ್ ಬಿ.ಕೆ., ವಿಶ್ವ ಹಿಂದು ಪರಿಷತ್ತು ಬೆಳ್ತಂಗಡಿ ಪ್ರಖಂಡ ಸೇವಾಪ್ರಮುಖ್ ಮೋಹನ್ ಬೆಳ್ತಂಗಡಿ, ಸಾಮಾಜಿಕ ಹೋರಾಟಗಾರರಾದ ಕೇಶವ ಗೌಡ, ಜಗದೀಶ್, ಮೋಹನ್ ಬಂಗೇರ, ಶೇಖರ್ ಕುಲಾಲ್, ಕಮಲಾಕ್ಷ ಇನ್ನಿತರರು ಉಪಸ್ಥಿತರಿದ್ದರು.

Related posts

ಓಡಿಲ್ನಾಳ ಉ.ಹಿ.ಪ್ರಾ. ಶಾಲೆಗೆ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ಅಕ್ಷತಾ ಯಶೋಧರ ಶೆಟ್ಟಿ ಆಯ್ಕೆ

Suddi Udaya

ಚಾಲ್ತಿಯಲ್ಲಿ ಇಲ್ಲದ ಸಂಸ್ಥೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹ: ಇಬ್ಬರು ಯುವಕರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ

Suddi Udaya

ನೀಟ್ ಪರೀಕ್ಷೆ ಅಕ್ರಮ, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಂದ ದೆಹಲಿಯಲ್ಲಿ ಸಂಸತ್ ಮುತ್ತಿಗೆ : ದೆಹಲಿ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

Suddi Udaya

ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ ಹತ್ತನೇ ಬಾರಿಗೆ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿಗೆ ಸಾಧನ ಪ್ರಶಸ್ತಿ

Suddi Udaya

ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದ ಪ್ರಕರಣ: 6 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

Suddi Udaya

ಉಜಿರೆಯ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!