ಗೇರುಕಟ್ಟೆ : ಯಸ್ ಪಿ ವೈ ಎಸ್ ಎಸ್ ಸಮಿತಿ ಕರ್ನಾಟಕ ಮಂಗಳೂರು ವಲಯ ಕ್ಷೀರಸಂಗಮ ಸಭಾಭವನ ಕಳಿಯ ಗೇರುಕಟ್ಟೆ ಯೋಗಕೇಂದ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಯೋಗ ಬಂಧುಗಳು ಆಚರಿಸಿದರು.
ನಿತ್ಯದ ಯೋಗ ಪ್ರಾತ್ಯಕ್ಷಿಗಳೊಂದಿಗೆ ವಿಶೇಷವಾಗಿ ದುರ್ಗಾ ನಮಸ್ಕಾರ, ಭಜನೆ ಮತ್ತು ಶ್ರೀ ಮಹಾಲಕ್ಷ್ಮಿಯ ಪೂಜೆಯನ್ನು ನೆರವೇರಿಸಲಾಯಿತು.
ಶ್ರೀ ಮಹಾಲಕ್ಷ್ಮಿ ವ್ರತ ಆಚರಣೆಯ ಬಗ್ಗೆ ಭಾರತಿ ಎಂ ಎಲ್ ಬೌದ್ಧಿಕ ನೀಡಿದರು. ಕೇಂದ್ರದ ಸಹಶಿಕ್ಷಕ ಸುಕೇಶ, ಯೋಗ ಪ್ರಾತ್ಯಕ್ಷಿಕೆಯಲ್ಲಿ ಸತೀಶ್ ನಾಳ, ಅರುಣ ಸಹಕರಿಸಿದರು.
ಅಶೋಕ ಆಚಾರ್ಯ, ವಸಂತ ಆಚಾರ್ಯ ,ವರದಿ ಪ್ರಮುಖ ಕೇಶವ ಪೂಜಾರಿ, ದಿವಾಕರ ಆಚಾರ್ಯ, ಮಧುಕರ
ಶಿವಣ್ಣ ಆಚಾರ್ಯ, ಶುಭಮಂಗಳ, ಪದ್ಮಲತಾ ಭಾಗವಹಿಸಿದ್ದರು.













