September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ಅಣ್ಣಾಮಲೈ ವಿವಿಯಿಂದ ಡಾಕ್ಟರೇಟ್‌ ಪದವಿ

ಬೆಳ್ತಂಗಡಿ: ನಾರಾವಿ ಗ್ರಾಮದ ಹಿರ್ತ್ತೊಟ್ಟು ಜಿನ್ನಪ್ಪ ಬಿ. ಪೂಜಾರಿ ಅವರ ಪತ್ನಿ, ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ದೊರಕಿದೆ.

ಮಂಗಳೂರಿನ ಬೆಸೆಂಟ್‌ ಮಹಿಳಾ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಮತ್ತು ಸೆಕೆಟೇರಿಯಲ್‌ ಪ್ರಾಕ್ಟೀಸ್‌ ವಿಭಾಗದ ಸಹ ಪ್ರಾಧ್ಯಾಪಕಿಯಾಗಿರುವ ಹೇಮಲತಾ ಅವರು ಅಣ್ಣಾಮಲೈ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರಾಮು ಎನ್‌ ಮತ್ತು ಆರ್‌.ವಿ. ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಬಾಲಾಜಿ ಬೋವಿ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು.

ಹೇಮಲತಾ ಅವರು ಮಂಡಿಸಿದ ‘ಇಂಪ್ಯಾಕ್ಟ್‌ ಆಫ್‌ ಟ್ರೈನಿಂಗ್‌ ಆನ್‌ ದಿ ಸಾಫ್ಟ್‌ ಅಂಡ್‌ ಹಾರ್ಡ್‌ ಸ್ಕಿಲ್ಸ್‌ ಟುವರ್ಡ್ಸ್‌ ಎಫೀಶಿಯೆನ್ಸಿ ಆಫ್‌ ಎಂಪ್ಲಾಯಿಸ್‌ ಆಫ್‌ ಎಂಎಸ್‌ಎಂಇಎಸ್‌ ಇನ್‌ ದಕ್ಷಿಣ ಕನ್ನಡ ಡಿಸ್ಟ್ರಿಕ್‌’ (Impact of training on the Soft and Hard skills towards efficiency of employees of MSMEs in Dakshina Kannada District) ಎಂಬ ಮಹಾಪ್ರಬಂಧ ಡಾಕ್ಟರೇಟ್‌ ಪದವಿಗೆ ಆಯ್ಕೆಯಾಗಿದೆ.

ಹೇಮಲತಾ ಅವರು ಶಿರ್ವ ಮಂಚಕಲ್‌ ಗ್ರಾಮದ ಸೋಮಪ್ಪ ಮತ್ತು ಕಂಪಾಬೈ ದಂಪತಿಯ ಪುತ್ರಿ.

Related posts

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ : ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಬಂಗೇರಕಟ್ಟೆಯಿಂದ ಮಡಂತ್ಯಾರಿನವರೆಗೆ ರಸ್ತೆಯಲ್ಲೆ ಹರಿಯುತ್ತಿರುವ ಮಳೆ ನೀರು: ತಕ್ಷಣ ಕ್ರಮ ಕೈಗೊಳ್ಳುವಂತೆ ಚಾಲಕರ ಹಾಗೂ ಸಾರ್ವಜನಿಕರ ಆಗ್ರಹ

Suddi Udaya

ಕೊಡಗು ವಿವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಕೆ.ಎನ್.ಜನಾರ್ಧನರವರ ನೇಮಕ: ಸಿರಿ ಸಂಸ್ಥೆಯಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮ

Suddi Udaya

ನಿಡಿಗಲ್-ಪಜಿರಡ್ಕ ಕಾಂಕ್ರೀಟ್ ರಸ್ತೆಯಲ್ಲಿ ಕುಸಿತ ಭೀತಿ

Suddi Udaya

ಮಡಂತ್ಯಾರು ಜೇಸಿ ಸಪ್ತಾಹ ವಿಜಯ ಎಸ್.ಸಾಲಿಯಾನ್‌ರಿಗೆ ಉದ್ಯಮರತ್ನ ಪುರಸ್ಕಾರ”

Suddi Udaya

ವೇಣೂರು ಸರಕಾರಿ ಜಾಗದಲ್ಲಿ ಚಿರತೆಯ ಮೃತದೇಹ ಪತ್ತೆ

Suddi Udaya
error: Content is protected !!