ಉಜಿರೆ: ಯು.ಎಸ್ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವು ಉಜಿರೆ ಸೌತ್ ಪ್ಯಾಲೇಸ್ ಹೋಟೇಲ್ ಬಳಿ ನಡೆಯಿತು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ರಾಷ್ಟ್ರ ಅಭಿವೃದ್ಧಿ ಸಾಧಿಸಬೇಕು ಎಂದರೆ ನಾಗರಿಕರ ಪಾತ್ರ ಅತ್ಯಂತ ಅಗತ್ಯ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಭಾವನೆ ನಮ್ಮಲ್ಲಿ ಇದ್ದರೆ ವಿಘಟನೆ ಮಾಡುವ ಶಕ್ತಿಯನ್ನು ಎದುರಿಸಬಹುದು. ನಾವು ಮಾಡುವ ಕೆಲಸ ರಾಷ್ಟ್ರಕ್ಕೆ ಪೂರಕವಾಗಿರಲಿ ಎಂದು ಶುಭಾಶಯಗಳನ್ನು ತಿಳಿಸಿದರು.
ಉಜಿರೆ ಯು.ಎಸ್. ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಲತೀಫ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಉದ್ಯಮಿಗಳಾದ ರಾಜೇಶ್ ಪೈ, ಶಿವಕಾಂತ, ಪ್ರವೀಣ್ ಫೆರ್ನಾಂಡಿಸ್, ರಝಾಕ್, ಮೋಹನ್ ಚೌಧರಿ, ಪ್ರಶಾಂತ್ ಜೈನ್, ಹೆಚ್.ಆರ್ ಪಾಟೀಲ್, ಪದ್ಮನಾಭ ಶೆಟ್ಟಿಗಾರ್, ಬೆಳ್ತಂಗಡಿ ಪತ್ರಕರ್ತ ಸಂಘದ ಉಪಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ಝಕರಿಯ ಎಸ್.ಎಲ್.ಬಿ. ಲ್ಯಾಂಡ್ ಲಿಂಕ್ಸ್ ಉಜಿರೆ, ಯುಬಿ ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಹಸೈನಾರ್, ವಿಕ್ರಂತ್ ಸೋಮಯಾಜಿ ಉಪಸ್ಥಿತರಿದ್ದರು.
ಉಜಿರೆ ಶ್ರೀ ದುರ್ಗಾ ಟೆಕ್ಸ್ಟ್ ಟೈಲ್ಸ್ ನ ಮಾಲಕ ಮೋಹನ್ ಚೌಧರಿ ವತಿಯಿಂದ ಆಟೋ ಚಾಲಕರಿಗೆ ಖಾಕಿ ಬಟ್ಟೆಯನ್ನು ವಿತರಿಸಿದರು.
ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಧನೇಶ್ ಧನ್ವಿ ಅಂಬ್ಯುಲೆನ್ಸ್ ಉಜಿರೆ, ಶ್ರೀಕಾಂತ್ ಮೆಸ್ಕಾಂ ಉಜಿರೆ, ಜಲೀಲ್ ಬಾಬ ಅಂಬ್ಯುಲೆನ್ಸ್ ಬೆಳ್ತಂಗಡಿ, ಆಸಿಫ್ ಸಮಾಜ ಸೇವಕರು ಕುಂಟಿನಿ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯು.ಎಸ್. ಆಟೋ ಚಾಲಕ ಮಾಲಕರ ಸಂಘ, ಉಜಿರೆ ಇದರ ಉಪಾಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಜನಾರ್ಧನ ಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿಗೀತೆಯನ್ನು ಹಾಡಿದರು. ಆಕಾಶ್ ಕೊಕ್ರಾಡಿ ನಿರೂಪಿಸಿದರು.











