ಉಜಿರೆ : 79 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಹಳೆಪೇಟೆ, ಉಜಿರೆ ಇದರ ವತಿಯಿಂದ ಟಿ. ಬಿ. ಕ್ರಾಸ್ ಜಂಕ್ಷನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸಲೀಂ ಕುಂಟಿನಿ (ಅಧ್ಯಕ್ಷರು SDTU ಹಳೆಪೇಟೆ ಉಜಿರೆ) ಹಾಗೂ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಸಲೀಂ ಕುಂಟಿನಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಂದಂತಹ ಎಲ್ಲಾ ಅಥಿತಿಗಳನ್ನು ಫಝಲ್ ಉಜಿರೆ ಸ್ವಾಗತಿಸಿ, ಅಬ್ದುಲ್ ಖಾದರ್ ಅಲ್ ಹಿಕಮಿ (ಮುದರ್ರಿಸರು ಅಲ್ ಬುಖಾರಿ ಮಸ್ಜಿದ್ ಕುಂಟಿನಿ) ಹಿತನುಡಿಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಖಾದರ್ ನಾವೂರ (ನಿರ್ದೇಶಕರು, ಇನ್ಫಾಮೇಟ್ ಫೌಂಡೇಶನ್ (ರಿ) ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜು ಮುಡಿಪು ಹಾಗೂ ಬೆಳ್ತಂಗಡಿ) ಹಾಗೂ ಪ್ರಕಾಶ್ ಫೆರ್ನಾಂಡಿಸ್ (ಮಾಲಕರು ಎಸ್. ಎ ಮೆಡಿಕಲ್ ಉಜಿರೆ) ಸಂದೇಶ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ SDTU ಕಾರ್ಯದರ್ಶಿ ಖಾದರ್ ನಾಡ್ಜೆ, ಆಟೋ ಯೂನಿಯನ್ ಸದಸ್ಯರು ಸಾರ್ವಜನಿಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.
ಸಮಾಜ ಸೇವಕರು ಹಾಗೂ ಮಾಲಕರು ಎಸ್. ಎ ಮೆಡಿಕಲ್ ಉಜಿರೆ ಪ್ರಕಾಶ್ ಫೆರ್ನಾಂಡಿಸ್ ರವರಿಗೆ ಸನ್ಮಾನಿಸಲಾಯುತು.
ಕಾರ್ಯಕ್ರಮವನ್ನು ಮರ್ಷಾದ್ ಉಜಿರೆ ನಿರೂಪಿಸಿ ಸಹಲ್ ನೀರ್ಸಾಲ್ ಧನ್ಯವಾದ ಮಾಡಿದರು.











