ವೇಣೂರು : ಪಡ್ಡಂದಡ್ಕ ನೂರುಲ್ ಹುದಾ ಮಸೀದಿಯಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆಯುನಡೆಯಿತು.
ಮಸೀದಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ನಡೆಯಿತು. ಕತೀಬ್ ಕಲಂದರ್ ಶಾಫಿ ಬಾಕವಿ ಧ್ವಜಾರೋಹಣ ಗೈದು ಸಂದೇಶ ನೀಡಿ ದೇಶ ಭಕ್ತಿ ನಮ್ಮ ಇಮಾನ್ ಅಂಗವಾಗಿದೆಂದರು. ಅಧ್ಯಕ್ಷರು ಮಾತಾಡಿ, ‘ನಾನು ಬದುಕುವುದು ಇನ್ನೊಬ್ಬರನ್ನು ಬದುಕಲು ಬಿಡುವುದು ನಮ್ಮ ಸ್ವಾತಂತ್ರದ ಮುಖ್ಯ ಕರ್ತವ್ಯ ಎಂದರು.
ಪತ್ರಕರ್ತ ಮಹಮ್ಮದ್ ಎಚ್ ವೇಣೂರು, ಶಾಫಿ ಕಿರೋಡಿ ಸಭೆಯಲ್ಲಿ ಮಾತಾಡಿದರು. ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಮಹಮದ್ ಪಿಜೆ, ಜತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವ ನಗರ, ಸದಸ್ಯರಾದ ಅಶ್ರಫ್ ಕಿರೋಡಿ,ಅಶ್ರಫ್ ಗಾಂಧಿನಗರ, ಪ್ರಮುಖರಾದ ಅಶ್ರಫ್ ಗಾಂಧಿ ಶಾಂತಿ ನಗರ, ಬೋರ್ವೆಲ್ ಪುತ್ತಾಕ, ಮೊಯ್ಜಿನ್ ನಜೀರ್ ,ಬುಲೆಟ್ ಖಾದರ್ ಪೆರಿಂಜೆ , ಅಬೂಬಕ್ಕರ್ ಪೆರಿಂಜೆ , ಹಕೀಮ್ ನಡು ಹೋಟೆಲ್ ಮತ್ತು ಜಮಾತಿನ ಗಣ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ ಸ್ವಾಗತಿಸಿ ಧನ್ಯವಾದವಿತ್ತರು.











