ಮಲವಂತಿಗೆ : ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ, ಅ. ಖಾ. ಹಿ. ಪ್ರಾ. ಶಾಲೆ ಮಲವಂತಿಗೆ ದಿಡುಪೆ ಇದರ ಸಹಯೋಗದಲ್ಲಿ ಆ. 27 , 28 ರಂದು ನಡೆಯುವ 39 ನೇ ವರ್ಷದ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಯುವ ವಕೀಲರು ಪೃಥ್ವಿ ಶ್ ಧರ್ಮಸ್ಥಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು, ಪಂಚಾಯತ್ ಸದಸ್ಯರಾದ ಪವಿತ್ರ ನಾರಾಯಣ ಪೂಜಾರಿ ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ
ಅಧ್ಯಕ್ಷ ತೀಕ್ಷಿತ್ ಕೆ. ಕಲ್ಬೆಟ್ಟು ದಿಡುಪೆ, ಕಾರ್ಯದರ್ಶಿ ಜಯಂತ ಹೆಗ್ಡೆ ಹೊಸ ತೋಟ ಹಾಗೂ ಗೌರವಧ್ಯಕ್ಷ ಕರಿಯ ಗೌಡ ಕೊಟ್ರಡ್ಕ ಮತ್ತು ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.











