ಉರುವಾಲು: ಕರಾಯ ಶಾಲೆಯಲ್ಲಿ ನಡೆದ ವಲಯ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ತಂಡ ಅಂತಿಮ ಸುತ್ತಿನಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ವಿದ್ಯಾರ್ಥಿಗಳಾದ ಯಜ್ಞೇಶ್ ಎಂಟನೇ ತರಗತಿ, ಮಹಮ್ಮದ್ ಶಮ್ಮಸ್ 7ನೇ ತರಗತಿ, ತ್ರಿತಿಕ್ 7ನೇ ತರಗತಿ, ಸಾತ್ವಿಕ್ ಎಂಟನೇ ತರಗತಿ, ಅಶ್ವಿನ್ ಎನ್ 7ನೇ ತರಗತಿ , ಕಾರ್ತಿಕ್ ಎಂಟನೇ ತರಗತಿ, ಸಾಕೆತ್ ಆಳ್ವ ಎಂಟನೇ ತರಗತಿ , ಗಗನ್ 6ನೇ ತರಗತಿ.
ಇವರಲ್ಲಿ ಯಜ್ಞೇಶ್ ಇವರಿಗೆ ಬೆಸ್ಟ್ ಆಲ್ ರೌಂಡರ್ ಹಾಗೂ ಕಾರ್ತಿಕ್ ಇವರಿಗೆ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಒಲಿದುಬಂದಿದೆ.
ಇವರಿಗೆ ಶ್ರೀಮತಿ ವಿಂಧ್ಯಾ ತರಬೇತಿ ನೀಡಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಿಗೆ ಶಾಲಾ ಶಿಕ್ಷಕ ವೃಂದ ಹಾಗೂ ಸೇವಾ ಸಮಿತಿ ಶುಭ ಕೋರಿದರು.











