ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು, ಧರ್ಮಸ್ಥಳ ವಲಯದ ಮೀಯಾರು ಕೆಮ್ಮಟಿ ಕಾರ್ಯಕ್ಷೇತ್ರದ ಬಲ್ಕಾಡು ಬಿ ತಂಡದ ಸದಸ್ಯರಾದ ಮಾಧವರವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕಕಕ್ಕೆ ಹಾನಿಯಾಗಿದ್ದು ಶ್ರೀ ಕ್ಷೇತ್ರದಿಂದ ಮಂಜೂರು ಮಾಡಿರುವ ರೂ. 5000 ಸಹಾಯಧನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುದುವೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಪೂರ್ಣಾಕ್ಷ ಬಿ, ತಾಲೂಕಿನ ಯೋಜನಾಧಿಕಾರಿಯವರಾದ ಯಶೋಧರ ಕೆ ಕೆಮ್ಮಟೆ ಒಕ್ಕೂಟ ಅಧ್ಯಕ್ಷ ಗಣೇಶ್ ಸಾಲಿಯಾನ್ ಮೀಯಾರು ಒಕ್ಕೂಟ ಅಧ್ಯಕ್ಷೆ ಅಪೂರ್ವ, ಅಶೋಕ್ ಟ್ರೇಡರ್ಸ್ ಮಾಲಕರಾದ ಅಶೋಕ್, ಒಕ್ಕೂಟದ ಪದಾಧಿಕಾರಿ ಪ್ರೀತಿ, ವಲಯ ಮೇಲ್ವಿಚಾರಕರಾದ ರವೀಂದ್ರ ಬಿ ಹಾಗೂ ಸೇವಾಪ್ರತಿನಿಧಿ ಚೈತ್ರರವರು ಉಪಸ್ಥಿತರಿದ್ದರು.











