ಚಾರ್ಮಾಡಿ : 2024-25 ನೇ ಸಾಲಿನ ತ್ರಿ ವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಚಾರ್ಮಾಡಿ ಇದರ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷ ಶ್ರೀಮತಿ ಜಯಂತಿ ಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಹಿಂದಿನ ಮಹಾಸಭೆ ಮತ್ತು ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದಿಸಲಾಯಿತು. ಒಕ್ಕೂಟದ 2024-25 ನೇ ಸಾಲಿನ ಲೆಕ್ಕಪರಿಶೋಧನೆ ಮಂಡಿಸಿ ಅನುಮೋದಿಸಲಾಯಿತು ಮುಂದಿನ ವರ್ಷದ ಒಕ್ಕೂಟದ ಆಯವ್ಯಯ ಕ್ರಿಯಾ ಯೋಜನ ವರದಿಯನ್ನು ಮಂಡಿಸಲಾಯಿತು. ಪದಾಧಿಕಾರಿಗಳ ಪದಗ್ರಹಣ ಮಾಡಲಾಯಿತು. ಸಂಜೀವಿನಿ ಯೋಜನೆಗಳ ಸಮಗ್ರ ಮಾಹಿತಿ ಯನ್ನು ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಸರ್ವ ಪದಾಧಿಕಾರಿಗಳು, ತಾಲೂಕು ಸಂಜೀವಿನಿ ಅಭಿಯಾನ ಘಟಕ ಬೆಳ್ತಂಗಡಿ ಇದರ ವಲಯ ಮೇಲ್ವಿಚಾರಕ ಜಯಾನಂದ , ಸ್ವ ಸಹಾಯ ಸಂಘದ ಪ್ರತಿನಿಧಿಗಳು, ಎಲ್ ಸಿ ಆರ್ ಪಿ, ಪಶು ಸಖಿ ಉಪಸ್ಥಿತರಿದ್ದರು.
ಕೃಷಿ ಸಖಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಎಮ್ ಬಿ ಕೆ ಭವ್ಯ ಸ್ವಾಗತಿಸಿದರು. ಎಲ್ ಸಿ ಆರ್ ಪಿ ರಮ್ಯಾ ಧನ್ಯವಾದವಿತ್ತರು.











