ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ವಲಯದ ಪರಾರಿ ಸಿದ್ದಬೈಲು ಎಂಬಲ್ಲಿ ವಾಸವಿರುವ ತುಳಸಿ ಸಂಘದ ಸದಸ್ಯೆ ಶಾರದರವರ ಮನೆಗೆ ವಿಪರೀತ ಗಾಳಿ ಮಳೆಯಿಂದ ಹಾನಿಯಾಗಿದ್ದು ಶ್ರೀ ಕ್ಷೇತ್ರದಿಂದ ಹೆಗ್ಗಡೆಯವರು ಮಂಜೂರು ಮಾಡಿದ ರೂ.5,000 ಸಹಾಯಧನವನ್ನು ಒಕ್ಕೂಟದ ಅಧ್ಯಕ್ಷ ಜಯಂತ್ ರಾವ್ ವಿತರಿಸಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ರವೀಂದ್ರ ಬಿ, ಒಕ್ಕೂಟದ ಪದಾಧಿಕಾರಿ ದೇಜಮ್ಮ, ಸೇವಾಪ್ರತಿನಿಧಿ ಸುಜಾತಾ ಉಪಸ್ಥಿತರಿದ್ದರು.











