ಉಜಿರೆ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಉಡುಪಿ ನ್ಯಾಯಾಲಯವು ಇಂದು ಸಂಜೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುತ್ತದೆ.
ಜಾಮೀನು ಮಂಜೂರುಗೊಂಡ ಬಳಿಕ ಉಡುಪಿಯಿಂದ ಉಜಿರೆಯತ್ತ ಹೊರಟ ಮಹೇಶ್ ಶೆಟ್ಟಿಯವರಿಗೆ ನಾರಾವಿ, ಅಳದಂಗಡಿ, ಬೆಳ್ತಂಗಡಿ, ಲಾಯಿಲ, ಉಜಿರೆಯ ರಸ್ತೆಯ ಉದ್ದಕ್ಕೂ ನೂರಾರು ಕಾರ್ಯಕರ್ತರುಗಳು, ಅಭಿಮಾನಿಗಳು ಭವ್ಯವಾದ ಸ್ವಾಗತವನ್ನು ಕೋರಿ, ಘೋಷಣೆಗಳನ್ನು ಹಾಕಿದರು.











