24 C
ಪುತ್ತೂರು, ಬೆಳ್ತಂಗಡಿ
July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಯುವದಿನಾಚರಣೆ ಪ್ರಯುಕ್ತ ಸ್ವ ಉದ್ಯೋಗ ಮಾಹಿತಿ ತರಬೇತಿ

ಕೊಕ್ಕಡ: ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಆ. 24 ರಂದು ಯುವದಿನ ಆಚರಿಸಲಾಯಿತು.

ಯುವಜನರಲ್ಲಿ ಸ್ವಾವಲಂಬನೆಯನ್ನು ಬೆಳೆಸಲು ಸ್ವ ಉದ್ಯೋಗ ಮಾಹಿತಿ ತರಬೇತಿ ನೀಡಲಾಯಿತು. ಚರ್ಚಿನ ಧರ್ಮಗುರುಗಳಾದ ವಂ. ಅನಿಲ್ ಪ್ರಕಾಶ್ ಡಿ ಸಿಲ್ವ ಕಾರ್ಯಕ್ರಮ ಉದ್ಘಾಟಿಸಿದರು.
ಉಜಿರೆ ರುಡಸೆಟ್ ಸಂಸ್ಥೆಯ ಪ್ರಾಧ್ಯಾಪಕ ಅಬ್ರಹಾಂ ಜೇಮ್ಸ್ ಪಿ.ವಿ. ಅವರು ಸ್ವಾವಲಂಬನೆಯ ಜೀವನ ಸಾಗಿಸಲು ಅಗತ್ಯ ಇರುವ ವಿವಿಧ ಸ್ವ ಉದ್ಯೋಗದ ತರಬೇತಿ ನೀಡಿದರು.

ರಿತೇಶ್ ಯಂ. ಸ್ಟ್ರೆಲ್ಲ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಕ್ಟರ್ ಸುವಾರಿಸ್ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಲಿಯ ಉಪಾಧ್ಯಕ್ಷ ಪ್ರವೀಣ್ ನೋಯೆಲ್ ಮೊಂತೆರೋ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, ಸರ್ವ ಆಯೋಗಗಳ ಸಂಚಾಲಕಿ ಶ್ರೀಮತಿ ವಿನಿಫ್ರೆಡ್ ಡಿ ಸೋಜ ಉಪಸ್ಥಿತರಿದ್ದರು.

ಯುವದಿನದ ಪ್ರಯುಕ್ತ ಶಿಬಿರಾರ್ಥಿ ಯುವಕ, ಯುವತಿಯರನ್ನು ಸನ್ಮಾನಿಸಲಾಯಿತು. ಜೆಸಿಂತಾ ಡಿ ಸೋಜಾ ಸ್ವಾಗತಿಸಿ, ಪ್ರೀತಿ ಮರಿಯಾ ವಂದಿಸಿದರು.

ಪ್ರಜ್ವಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಮೌರಿಸ್ ಡಿ ಸೋಜಾ, ವಿನ್ಸೆಂಟ್ ಮಿನೇಜಸ್, ವಿನ್ಸೆಂಟ್ ಸುವಾರಿಸ್, ದೀಪ ವಿ, ವಂ. ಅಶೋಕ ಡಿ ಸೋಜಾ ಸಹರಿಸಿದರು.

Related posts

ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆರಿಗೆ ಮಾಡಿಸಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಕಿಯರು

Suddi Udaya

ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಘಟಕಗಳಿಗೆ ಭೇಟಿ

Suddi Udaya

ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಉಜಿರೆ: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯ ಆಚರಣೆ

Suddi Udaya

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

Suddi Udaya

ಮುಂಡೂರು ಹಾಲು ಉತ್ಪಾದಕರ ಸಂಘದ ಸದಸ್ಯ ರೋಷನ್ ಡಿಸೋಜ ರವರಿಗೆ ‘ಕ್ಷೀರ ರತ್ನ’ ಪ್ರಶಸ್ತಿ

Suddi Udaya
error: Content is protected !!