ನ್ಯಾಯತರ್ಪು : ಇಲ್ಲಿಯ ನಾಳ ನಿವಾಸಿ ಶ್ರೀಧರ್ ಎಂಬವರ ಪುತ್ರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರಿಗೆ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ. ಸಂಘದ ಅಧ್ಯಕ್ಷ ವಸಂತ ಮಜಲು ಮತ್ತು ನಿರ್ದೇಶಕರಾದ ಮಮತಾ ಶೆಟ್ಟಿ, ಗೋಪಾಲ ಬನ, ಲೋಕೇಶ್ ನಾಳ, ಕುಶಾಲಪ್ಪ ಗೌಡ ಅವರ ಮನೆಗೆ ತೆರಳಿ ಆರ್ಥಿಕ ಧನ ಸಹಾಯ ನೀಡಿದರು.






