ಗೇರುಕಟ್ಟೆ : ನ್ಯಾಯತರ್ಪು ಗ್ರಾಮದ ಪಲ್ಲಾದೆ ಸಮೀಪದ ತೋಟದ ಪಕ್ಕದಲ್ಲಿರುವ ಕೆರೆಯ ತೋಟದಲ್ಲಿ ಮೃತ ಶ್ರೀಧರ (34 ವರ್ಷ) ಶವ ಪತ್ತೆಯಾದ ಘಟನೆ ಆ.26.ನಡೆಯಿತು.
ಕಣಿಯೂರು ಗ್ರಾಮದ ಕುಂಡಗುರಿ ನಿವಾಸಿ ಕೊರಗು ಪುತ್ರ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ಹರಣಿ ಇಲಾಖೆಯ ಸಂಬಂಧ ಪಟ್ಟ ಕೆರೆಗೆ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ ಪೊಲೀಸರು ಆಗಮಿಸಿಸ್ಥಳ ಪರಿಶೀಲಿಸಿದ್ದಾರೆ ಪತ್ನಿ, ಪುತ್ರ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.











