July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದಕಟ್ಟೆ ವ್ಯವಸ್ಥಾಪನಾ ಸಮಿತಿ ರಚನೆ: ಅಧ್ಯಕ್ಷರಾಗಿ ಡಾ| ಶಶಿಧರ ಡೋಂಗ್ರೆ ಸೇನೆರೆಬೈಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ

ಬೆಳ್ತಂಗಡಿ: ಆದಿಪೂಜಿತ ಶ್ರೀ ಮಹಾಗಣಪತಿಯ ವಿಶೇಷ ಸಾನಿಧ್ಯವುಳ್ಳ ಕಾರಣೀಕ ಕ್ಷೇತ್ರ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ರಚನೆಯನ್ನು ನಡೆಸಲಾಗಿದೆ.


ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಂದಾಳು, ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಡಾ| ಶಶಿಧರ ಡೋಂಗ್ರೆ ಸೇನೆರೆಬೈಲು ಆಯ್ಕೆಯಾದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಉದ್ಯಮಿ ಸತೀಶ್ ಪೂಜಾರಿ ಆಯ್ಕೆಯಾದರು.


ಪ್ರಧಾನ ಅರ್ಚಕ ಸೋಮನಾಥ ಮಯ್ಯ ಅಳದಂಗಡಿ, ಸದಸ್ಯರಾಗಿ ಯುವ ಉದ್ಯಮಿ ದೀಪಕ್ ಹೆಚ್.ಡಿ ಸಂದ್ಯಾದೀಪ ನಾಲ್ಕೂರು, ಸದಾನಂದ ತೋಟದಪಲ್ಕೆ, ಜಿನ್ನಪ್ಪ ಶೆಟ್ಟಿ ಕೆದ್ದು, ಸತೀಶ್ ದೇವಾಡಿಗ ಶಾರಬೈಲು, ಶ್ರೀಮತಿ ಸುಮಲತಾ ನೀರಲ್ಕೆ, ಲಾವಣ್ಯ ದೇವಿಪ್ರಸಾದ್ ಶೆಟ್ಟಿ ಅವರು ಸಮಿತಿಯ ಸದಸ್ಯರಾಗಿರುತ್ತಾರೆ.


ದೇವಳದ ಆಡಳಿತಾಧಿಕಾರಿ ಪಶು ಪರಿವೀಕ್ಷಕ ಡಾ.ರಮೇಶ್ ಅಳದಂಗಡಿ ಅವರು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Related posts

ಕಡಿರುದ್ಯಾವರ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಓಮ್ನಿ ಕಾರು

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಕಾಮರ್ಸ್ ಕ್ಲಬ್ ನ ವತಿಯಿಂದ ವಾಣಿಜ್ಯ ಫೆಸ್ಟ್

Suddi Udaya

ವಿಧಾನ ಪರಿಷತ್ ಕಲಾಪ; ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ, ಫಾರ್ಮ್-3 ನೀಡಲು ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ

Suddi Udaya

ಮಚ್ಚಿನ: ನೆತ್ತರ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

Suddi Udaya
error: Content is protected !!