ಕೊಕ್ಕಡ: ಇಲ್ಲಿಯ ಅಡ್ಡೈ ಶ್ರೀ ಶಿವಶಕ್ತಿ ಭಜನಾ ಮಂದಿರ ಇದರ ನೂತನ ಭಜನಾ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.


ವಾಸ್ತುತಜ್ಞರಾದ ರತ್ನಾಕರ ಪಾಂಗಣ್ಣಾಯ ಮಿಯಾಳ ಇವರು ಶಿವನ್ಯಾಸ ಕಾರ್ಯಕ್ರಮದ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು. ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಆರ್ಥಿಕ ಸಹಕಾರದೊಂದಿಗೆ ಈ ಭಜನಾ ಮಂದಿರವು ನಿರ್ಮಾಣಗೊಳ್ಳಲಿದ್ದು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ಟ ಹಿತ್ತಲು, ಟ್ರಸ್ಟ್ ನ ಸದಸ್ಯರು ಧರ್ಣಪ್ಪ ಕೆಂಪಕೋಡಿ, ಪುರಂದರ ಕಡಿರ, ಶ್ರೀಮತಿ ಬಾಬಿತಾ ರಾಘವ ಕೊಲ್ಲಜೆ, ಉದ್ಯಮಿ ಬಾಲಕೃಷ್ಣ ನೈಮಿಶ, ಹಿರಿಯರಾದ ಈಶ್ವರ ಭಟ್ ಹಿತ್ತಿಲು, ಶಿವಶಕ್ತಿ ಭಜನಾ ಮಂದಿರ ಇದರ ಅಧ್ಯಕ್ಷ ರವಿಚಂದ್ರ ಪೊಡಿಕೆತ್ತೂರು, ಕಾರ್ಯದರ್ಶಿ ಆನಂದ ಅಡ್ಡೈ , ಪಿಲಿಚಾಮುಂಡಿ ದೈವಸ್ಥಾನ ಮಾಸ್ತಿಕಲ್ಲು ಮಜಲು ಇದರ ಆಡಳಿತ ಟ್ರಷ್ಟಿ ಕುಶಾಲಪ್ಪಗೌಡ ಪೊಡಿಕೇತ್ತೂರು, ಸ್ಥಳೀಯ ಪ್ರಮುಖರಾದ ಗಣೇಶ್ ಅಂಕದ ಮಜಲು, ಅಚ್ಚುತ ನಾಯ್ಕ್ ಅಡೀಲು, ಶ್ರೀಮತಿ ಲಕ್ಶ್ಮೀ ಅಡ್ಡಯಿ, ಶೀನ ಅಡ್ಡಯಿ ಹಾಗೂ ಇತರರು ಉಪಸ್ಥಿತರಿದ್ದರು.











