30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯಿಂದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ರವರಿಗೆ ಗೌರವಾರ್ಪಣೆ

ಕಳೆಂಜ : ಕಳೆಂಜ ಗ್ರಾಮದ ಪಟ್ಟೆರಿ ಮನೆಯಿಂದ ಆಯ್ಕೆಯಾಗಿರುವ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ವಂದನೀಯ ಜೇಮ್ಸ್ ಪಟ್ಟೆರಿಯಲ್ ರವರು ಆ.31ರಂದು ತಮ್ಮ ಸ್ವಗ್ರಾಮದ ಪಟ್ಟೆರಿ ಮನೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ವತಿಯಿಂದ ವಿಜೃಂಭಣೆಯಿಂದ ಗೌರವಾರ್ಪಣೆ ನಡೆಯಿತು.

ಗೌರವ ಸ್ವೀಕರಿಸಿ ಧರ್ಮಧ್ಯಕ್ಷರು ಮಾತನಾಡುತ್ತಾ, “ದೇವರ ಅನುಗ್ರಹದಿಂದ ಈ ಸ್ಥಾನಕ್ಕೆ ಆಯ್ಕೆಯಾಗಿದ್ದು, ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂಬುದು ಸಂತೋಷದ ಸಂಗತಿ. ನಾವು ಎಲ್ಲರೂ ವಿಭಿನ್ನ ಜಾತಿಗಳವರಾಗಿದ್ದರೂ, ನೀವು ಎಲ್ಲರೂ ಬಂದು ಗೌರವಿಸಿದಿದ್ದು ಹೃದಯಂಗಮವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು” ಎಂದು ತಮ್ಮ ಆಶೀರ್ವಾದಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಂತೋಷ್ ಜೈನ್, ಟಿ.ಎಸ್. ನಿತ್ಯಾನಂದ ರೈ, ಧನಂಜಯ ಗೌಡ, ಶ್ರೀಧರ್ ರಾವ್, ಅಕ್ಷತ್ ರೈ, ಜೈಸನ್ ಪಟ್ಟೆರಿ, ರಾಜೇಶ್ ಶೆಟ್ಟಿ, ವೀರೇಂದ್ರ ಜೈನ್, ಸಂಜೀವ ದೇವಾಡಿಗ, ವಿನೋದ್ ಎಸ್, ಪ್ರೇಮ ಬಿ ಎಸ್, ಗಂಗಾಧರ ಗೌಡ, ಸೀನಪ್ಪ ಗೌಡ ಸೇರಿದಂತೆ ಹಲವರು ಜೆ ಸಿ ಸದಸ್ಯರು ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಜು.6: ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಮಹಾ ರಥೋತ್ಸವ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜು – ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಚಾಮಾ೯ಡಿ ಘಾಟಿಯಲ್ಲಿ ಧಮ೯ಸ್ಥಳದ ದಿಲೀಫ್ ರವರ ಶವ ಪತ್ತೆ ಪ್ರಕರಣ : ಅಪಘಾತ ಎಸಗಿದ ತರಕಾರಿ ಸಾಗಾಟದ ಪಿಕಫ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya
error: Content is protected !!