ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯಿಂದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ರವರಿಗೆ ಗೌರವಾರ್ಪಣೆ

ಕಳೆಂಜ : ಕಳೆಂಜ ಗ್ರಾಮದ ಪಟ್ಟೆರಿ ಮನೆಯಿಂದ ಆಯ್ಕೆಯಾಗಿರುವ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ವಂದನೀಯ ಜೇಮ್ಸ್ ಪಟ್ಟೆರಿಯಲ್ ರವರು ಆ.31ರಂದು ತಮ್ಮ ಸ್ವಗ್ರಾಮದ ಪಟ್ಟೆರಿ ಮನೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ವತಿಯಿಂದ ವಿಜೃಂಭಣೆಯಿಂದ ಗೌರವಾರ್ಪಣೆ ನಡೆಯಿತು.

ಗೌರವ ಸ್ವೀಕರಿಸಿ ಧರ್ಮಧ್ಯಕ್ಷರು ಮಾತನಾಡುತ್ತಾ, “ದೇವರ ಅನುಗ್ರಹದಿಂದ ಈ ಸ್ಥಾನಕ್ಕೆ ಆಯ್ಕೆಯಾಗಿದ್ದು, ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂಬುದು ಸಂತೋಷದ ಸಂಗತಿ. ನಾವು ಎಲ್ಲರೂ ವಿಭಿನ್ನ ಜಾತಿಗಳವರಾಗಿದ್ದರೂ, ನೀವು ಎಲ್ಲರೂ ಬಂದು ಗೌರವಿಸಿದಿದ್ದು ಹೃದಯಂಗಮವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು” ಎಂದು ತಮ್ಮ ಆಶೀರ್ವಾದಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಂತೋಷ್ ಜೈನ್, ಟಿ.ಎಸ್. ನಿತ್ಯಾನಂದ ರೈ, ಧನಂಜಯ ಗೌಡ, ಶ್ರೀಧರ್ ರಾವ್, ಅಕ್ಷತ್ ರೈ, ಜೈಸನ್ ಪಟ್ಟೆರಿ, ರಾಜೇಶ್ ಶೆಟ್ಟಿ, ವೀರೇಂದ್ರ ಜೈನ್, ಸಂಜೀವ ದೇವಾಡಿಗ, ವಿನೋದ್ ಎಸ್, ಪ್ರೇಮ ಬಿ ಎಸ್, ಗಂಗಾಧರ ಗೌಡ, ಸೀನಪ್ಪ ಗೌಡ ಸೇರಿದಂತೆ ಹಲವರು ಜೆ ಸಿ ಸದಸ್ಯರು ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಮಹಿಳಾ ಮಂಡಲದ ವತಿಯಿಂದ ಸಿಯೋನ್ ಆಶ್ರಮದ ಆಡಳಿತ ಟ್ರಸ್ಟಿ ಶ್ರೀಮತಿ ಮೇರಿ ಯು.ಪಿ. ರವರಿಗೆ ಸನ್ಮಾನ

Suddi Udaya

ಬಂದಾರು : ಬಂದಾರು ಗ್ರಾ.ಪಂ. ನಿಂದ ನಿವೃತ್ತಿ ಪಡೆದ ಸಿಬ್ಬಂದಿ ಮೋಹನ್ ಬಂಗೇರ ರವರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ರಾಜ್ಯದ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ದ ಕಳಿಯ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಬೆಳಾಲು: ನೋಣಯ್ಯ ಗೌಡ ನಿಧನ

Suddi Udaya

ಉರುವಾಲು: ಬಾಯ್ತಾರು ಕಾರಿಂಜ ಶ್ರೀ ವನಶಾಸ್ತರ ದೇವಸ್ಥಾನಕ್ಕೆ ರಕ್ಷಿತ್ ಶಿವರಾಂ ಭೇಟಿ: ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ

Suddi Udaya
error: Content is protected !!