

ಬೆಳ್ತಂಗಡಿ: ಸಹಾಯಕ ಇಂಜಿನಿಯರ್ ಯಾಗಿದ್ದ ಶಿವಕುಮಾರ್ ಕೆ.ಎಸ್. ರವರು ಪ್ರಸುತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರಿಂಗ್ ಹುದ್ದೆಗೆ ಭಡ್ತಿ ಹೊಂದಿ ಮಾರುಕಟ್ಟೆ ಅಭಿವೃದ್ದಿ ಯೋಜನೆ ಉಪವಿಭಾಗ ಮಂಗಳೂರು ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ.
ಇವರು ಲೋಕೋಪಯೋಗಿ ಇಲಾಖೆ ಉಪವಿಭಾಗ ಬೆಳ್ತಂಗಡಿಯಲ್ಲಿ 5 ವರ್ಷಗಳ ಕಾಲ ಸಹಾಯಕ ಇಂಜಿನಿಯರ್ ಯಾಗಿ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ಈ ವೇಳೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯಲ್ಲಿ ಬಿಳ್ಕೋಡುಗೆ ಸಮಾರಂಭವು ನಡೆಯಿತು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಕ್ಕಪ್ಪ , ಪ್ರಥಮ ದರ್ಜೆ ಸಹಾಯಕರು ಶೆಟ್ಟಿ ನಾರಾಯಣ ಸಂಜೀವ ಹಾಗೂ ಕಚೇರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.











