ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯ ಹಳೆ ವಿದ್ಯಾರ್ಥಿ ಸಂಘದ ಪುನಾರಚನೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಲೋಕೇಶ್ ಓಣಾಜೆ, ಕಾರ್ಯದರ್ಶಿಯಾಗಿ ರಮೇಶ್ ಮರಕಡ, ಕೋಶಾಧಿಕಾರಿಯಾಗಿ ಕರಿಯಣ್ಣ ಬೇರಿಕೆ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಜೆ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಭಾರತಿ ಮರಕಡ ಮತ್ತು ಲೋಕೇಶ್ ಮಂಡಾಲು,ಸಂಘಟನಾ ಕಾರ್ಯದರ್ಶಿಗಳಾಗಿ ರಾಜಗೋಪಾಲ್ ಭಟ್,ಯತೀಶ್ ಕೊಡಂಗೆ ಮತ್ತು ರಾಜೇಶ್ ಗೌಡ ಕುರ್ಕಿಲು ಆಯ್ಕೆಯಾದರು.











