26.7 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ರೂ. 1 ಕೋಟಿ ಲಾಭ, ಶೇ. 12 ಡಿವಿಡೆಂಡ್

ಬೆಳ್ತಂಗಡಿ: ಬಾರ್ಯ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಪ್ರವೀಣ್ ರೈ ಪಿ. ಅಧ್ಯಕ್ಷತೆಯಲ್ಲಿ ಸೆ.2 ರಂದು ಬಾರ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷ ಪ್ರವೀಣ್ ರೈ ಮಾತನಾಡಿ ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ 2020-25ನೇ ಸಾಲಿನ ಆಡಳಿತ ಮಂಡಳಿ ಅವಧಿಯ ಕೊನೆಯ ಮಹಾಸಭೆ ಇದಾಗಿದೆ. ಪ್ರಥಮ ಎರಡುವರೆ ವರ್ಷದ ಅವಧಿಯಲ್ಲಿ ಪ್ರಸನ್ನ ಗೌಡ ರವರು ಅಧ್ಯಕ್ಷರಾಗಿ, ದ್ವಿತೀಯ ಎರಡುವರೆ ವರ್ಷದ ನನ್ನ ಅಧ್ಯಕ್ಷೀಯ ಅವಧಿಯ ಒಟ್ಟು ಐದು ವರ್ಷದಲ್ಲಿ ಪುತ್ತಿಲ ಮತ್ತು ಬಾರ್ಯ ಗ್ರಾಮ ವ್ಯಾಪ್ತಿಯ ಎಲ್ಲಾ ಕೃಷಿಕರಿಗೆ ಮತ್ತು ಇತರ ಸದಸ್ಯ ಬಂಧುಗಳಿಗೆ ಯಾವುದೇ ತಾರತಮ್ಯ ಮಾಡದೆ ಉತ್ತಮ ಸೇವೆಯನ್ನು ನೀಡಿದ್ದೇವೆ. ಸಂಘದಲ್ಲಿ 2906 ಸದಸ್ಯರಿದ್ದು ಒಟ್ಟು ರೂ.25,71,65,421 ಠೇವಣಾತಿಯನ್ನು ಹೊಂದಿದೆ ಮತ್ತು ರೂ.5,02,77,000 ಪಾಲು ಬಂಡವಾಳವನ್ನು ಹೊಂದಿದೆ. ಮತ್ತು ರೂ.68,00,35,758 ದುಡಿಯುವ ಬಂಡವಾಳವನ್ನು ಹೊಂದಿದೆ. ನಮ್ಮ ಸಂಘವು ರೂ.54,84,87,942 ಸಾಲವನ್ನು ರೈತರಿಗೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ರೂ.2,81,71,66,790 ವ್ಯವಹಾರ ನಡೆಸಿ, ವಾರ್ಷಿಕವಾಗಿ 1,02,75,120.88 ಲಾಭ ಗಳಿಸಿದ್ದು ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡುವುದಾಗಿ ಹೇಳಿದರು.

2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಯಿತು.

ಉಪಾಧ್ಯಕ್ಷ ಶಿವರಾಮ ಕೆಳಗಿನಂಗಡಿ, ನಿರ್ದೇಶಕರಾದ ಪ್ರಸನ್ನ ಯನ್, ರಾಜೇಶ್ ರೈ ಹೆನ್ನಡ್ಕ, ಪಾರ್ಶ್ವನಾಥ ಜೈನ್ ಕಲ್ಲಾಜೆ, ಶೇಸಪ್ಪ ಸಾಲಿಯಾನ್, ಅಶ್ರಫ್ ಪೊಸೆಕ್ಕೆಲ, ಲಿಡಿಯಾ ಜೆರೋಮ್ ಬ್ರಾಗ್ಸ್ , ಸವಿತಾ ವೆಂಕಟೇಶ್ ಪೂಜಾರಿ, ಪ್ರಸಾದ್ ಮೂರುಗೋಳಿ, ಮೋಹನ್ ಗೌಡ, ಸುರೇಶ್, ದ.ಕ.ಜಿ.ಕೇ.ಸ.ಬ್ಯಾಂಕಿನ ಪ್ರತಿನಿಧಿ ಸಿರಾಜುದ್ದೀನ್, ವೃತ್ತಿಪರ ನಿರ್ದೇಶಕರಾದ ಚಂದ್ರಶೇಖರ್, ಅರುಣ್ ಬಂಗೇರ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಟಿ‌. ವರದಿ ವಾಚಿಸಿದರು. ನಿರ್ದೇಶಕ ಶೇಸಪ್ಪ ಸಾಲಿಯಾನ್ ಸ್ವಾಗತಿಸಿದರು.

Related posts

2024 ಫೆಬ್ರವರಿ ತಿಂಗಳಲ್ಲಿ ವೇಣೂರು ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ ಮಹಾಶಿವರಾತ್ರಿಯ ಪ್ರಯುಕ್ತ 1008 ಸೀಯಾಳ ಅಭಿಷೇಕ

Suddi Udaya

ಬೆಳ್ತಂಗಡಿ ಎಸ್.ಕೆಎಸ್.ಎಸ್.ಎಫ್ ನಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya

ಪ್ರಸನ್ನ ಕಾಲೇಜ್ ಕ್ಯಾಂಪಸ್‌ನಲ್ಲಿ ಹೋಟೆಲ್ ಸಮಡೈನ್ ಶುಭಾರಂಭ ; ಮಾಜಿ ಸಚಿವ ಗಂಗಾಧರ ಗೌಡರಿಂದ ಉದ್ಘಾಟನೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!