ಮಡಂತ್ಯಾರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಸೆ. 5 ರಂದು ನಡೆಯುವ ಸಮಾವೇಶದ ಪೂರ್ವಭಾವಿ ಸಭೆಯನ್ನು ಮಡಂತ್ಯಾರು ಗಣಪತಿ ಮಂಟಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಬಳ್ಳಮಂಜ ದೇವಸ್ಥಾನದ ಆಡಳಿತ ಮುಖ್ಯಸ್ಥ ಹರ್ಷ ಸಂಪಿಗೆತಾಯ, ಪ್ರಗತಿ ಎಂಟರ್ ಪ್ರೈಸಸ್ ಮಾಲಕರಾದ ಜಯಂತ್ ಶೆಟ್ಟಿ, ಕೊರಿಂಜ ದೇವಸ್ಥಾನ ಆಡಳಿತ ಮುಖ್ಯಸ್ತರಾದ ಯೋಗೀಶ್ ಕಡ್ತಿಲ, ಬಸವನಗುಡಿ ಬಸವೇಶ್ವರ ದೇವಸ್ಥಾನ ಮುಖ್ಯಸ್ಥರಾದ ಪ್ರಶಾಂತ್, ಪಾರೆಂಕಿ ಮಹಿಷಮರ್ದಿನೀ ದೇವಸ್ಥಾನ ಮಾಜಿ ಅಧ್ಯಕ್ಷ ರತ್ನಕರ ಶೆಟ್ಟಿ ಮುಡಯೂರ್, ವಲಯ ಜನಜಾಗೃತೀ ಮಾಜಿ ಅಧ್ಯಕ್ಷೆ ಪುಷ್ಪಾ ರಾಜ್ ಜೈನ್, ಮಡಂತ್ಯಾರ್ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಅರವಿಂದ ಜೈನ್, ಜನಜಾಗೃತೀ ಸದಸ್ಯ ಗೋಪಾಲ ಕೋಲಾಜೆ, ವಲಯ ಜನಜಾಗೃತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ , ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್, ಯೋಜನಾಧಿಕಾರಿಗಳಾದ ಅಶೋಕ್, ಎಲ್ಲಾ ಒಕ್ಕೂಟದ ಅಧ್ಯಕ್ಷರು ಹಾಗೂ ಎಲ್ಲಾ ದೈವ ದೇವಸ್ಥಾನದ ಮುಖಂಡರು ಉಪಸ್ಥಿತರಿದ್ದರು.











