September 6, 2026
ವರದಿ

ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ ರೂ.3.03 ಕೋಟಿ ವ್ಯವಹಾರ;ರೂ.13.04 ಲಕ್ಷ ಲಾಭ ; ಶೇಕಡಾ 25 ಡಿವಿಡೆಂಟ್

ಮದ್ದಡ್ಕ: ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ 40ನೇ ವಾರ್ಷಿಕ ಸಾಮಾನ್ಯ ಸಭೆ ಗುರುವಾ ಯನ ಕೆರೆ ಕುಲಾಲ ಮಂದಿರ ದಲ್ಲಿ ಸೆ.3ರಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ರೂ. 3.03ಕೋಟಿ ವ್ಯವಹಾರಗಳ ಗಳಿಸಿದ್ದು ರೂ. 13.04ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಶೇ.65 ಬೋನಸ್, ಶೇ.25 ಡಿವಿಡೆಂಡ್‌ ಘೋಷಿಸಿದರು.ಸಭೆಯಲ್ಲಿ ನಿರ್ದೇಶಕರಾದ ಅಣಿ ಶೆಟ್ಟಿ, ರಮೇಶ್ ಪೂಜಾರಿ, ವಿನೋದ ಶೆಟ್ಟಿ, ಮೋಹನ್ ನಾಯ್ಕ, ಶಿವಪ್ಪ ಗೌಡ, ಶಶಿಕಲಾ, ಕಾಂತಪ್ಪ ಮೂಲ್ಯ, ರುದೇಶ್ ಕುಮಾರ್, ನಾರಾಯಣ ಮೂಲ್ಯ, ವಸಂತಿ, ಉಪಸ್ಥಿರಿದ್ದರು.

ಕೆ.ಎಂ.ಎಫ್. ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮತ್ತು ವಿಸ್ತರಣಾಧಿಕಾರಿ ಸುಚಿತ್ರ ರೈತರಿಗೆ ಮಾಹಿತಿ ನೀಡಿದರು. ಸಂಘದ ಸದಸ್ಯರ ಮಕ್ಕಳಾದ ಎಸ್ಎಸ್‌ಎಲ್‌ಸಿ ಹಾಗೂ ಪಿ.ಯುಸಿ ಯವರಿಗೆ ತಲಾ 2000ರಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಉಪಾಧ್ಯಕ್ಷ ವಿವೇಕಾನಂದ ಸಾಲಿಯನ್ ಸ್ವಾಗತಿಸಿ, ಕಾರ್ಯದರ್ಶಿ ಪವಿತ್ರ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ, ನಿರ್ದೇಶಕ ಚಿದಾನಂದ ಧನ್ಯವಾದವಿತ್ತರು

Related posts

ರುಡ್‌ಸೆಟ್ ಉಜಿರೆಯ 1000ನೇ ತರಬೇತಿ ಕಾರ್ಯಕ್ರಮಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

Suddi Udaya

ಭಾರಿ ಮಳೆ ಹಿನ್ನಲೇ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತುರ್ತು ಸಭೆ

Suddi Udaya

ವಿದ್ಯಾಶ್ರೀ ಅಡೂರ್ ಅವರ 3 ನೇ ಕವನಸಂಕಲನ “ಪಯಣ” ಕವನಗಳ ಹಾದಿಯಲ್ಲಿ ಬಿಡುಗಡೆ

Suddi Udaya

ನಿವೃತ್ತ ಪಿಡಿಓ ಪೂವಪ್ಪ ಬಂಗೇರ ನಿಧನ

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯೋತವದ ಪ್ರಯುಕ್ತ ಯೋಧರು-ಪೋಲಿಸರಿಗೆ ಗೌರವಾರ್ಪಣೆ ‘ರಕ್ಷಕ ನಮನ’

Suddi Udaya

ಭೀಮ ಗೋಲ್ಡ್ CSR ಸಹಕಾರದಿಂದ ಬೈಂದೂರು ಸೇವಾಧಾಮದಲ್ಲಿ ನೀರಿನ ಘಟಕದ ಉದ್ಘಾಟನೆ

Suddi Udaya
error: Content is protected !!