ಗೇರುಕಟ್ಟೆ : ಗೇರುಕಟ್ಟೆ ಕಳಿಯ ಗ್ರಾಮದ ನಿವಾಸಿ ಜವಳಿ ವ್ಯಾಪಾರ ವಹಿವಾಟು ಉದ್ಯಮಿ ಸತೀಶ್ ಕುಮಾರ್ ಬಿ. (58 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಸೆ.4.ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು, ಪತ್ನಿ ಯಶವಂತಿ ಸತೀಶ್, ಓರ್ವ ಪುತ್ರ, ಓರ್ವ ಪುತ್ರಿ, ಓರ್ವ ಸಹೋದರಿ, 4 ಸಹೋದರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.











