ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ಮಾನವಿಕ ಸಂಘದ ಉದ್ಘಾಟನೆ

ಬೆಳ್ತಂಗಡಿ : ಸ.ಪ್ರ.ದ ಕಾಲೇಜು, ಬೆಳ್ತಂಗಡಿಯಲ್ಲಿ ಮಾನವಿಕ ಸಂಘವನ್ನು ಡಾ.ಶರತ್ ಕುಮಾರ್ ಟಿ.ಕೆ., ನಿವ್ರತ್ತ ಪ್ರಾಂಶುಪಾಲರು, ಸ.ಪ್ರ.ದ ಕಾಲೇಜು ಪುಂಜಾಲಕಟ್ಟೆ, ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಜ್ಞಾನವನ್ನು ಜಾಣ್ಮೆಯಿಂದ ಬಳಸಿಕೊಂಡಾಗ ಅವಕಾಶಗಳು ನಿಮ್ಮದಾಗುತ್ತವೆ. ಶ್ರದ್ಧೆ, ಬದ್ಧತೆಯಿಂದ ಜೀವನದಲ್ಲಿ ಮುನ್ನುಗ್ಗಿದಾಗ ಯಶಸ್ಸು ತನ್ನಿಂದ ತಾನೆ ಬರುತ್ತದೆ. ಜೀವನದಲ್ಲಿ ತಿಳಿಯುವ ಕುತೂಹಲ, ಕೌತುಕ ಕಲಿಕೆಗೆ ಹಾಗೂ ಯಶಸ್ಸಿಗೆ ಪೂರಕ ಎಂದರು.

ಪ್ರೊ.ಮಾರುತಿ ಜಿ ಕ್ರಿಯಾ ಯೋಜನೆ ಬಗ್ಗೆ ಮಾತನಾಡಿದರು. ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ ಮಾನವಿಕ ಸಂಘದ ಸಂಚಾಲಕರು ಪ್ರಾಸ್ತಾವಿಸಿದರು. ಐಕ್ಯೂಎಸಿ ಸಂಚಾಲಕ ಡಾ.ಕುಶಾಲಪ್ಪ ಎಸ್, ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಪ್ರೊ.ಪದ್ಮನಾಭ ಕೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ರಾಧಾಕೃಷ್ಣ ಹೆಚ್.ಬಿ, ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ.ರವಿ ಎಂ.ಎನ್, ಪ್ರೊ.ಸುರೇಶ್ ಡಿ, ಉಪಸ್ಥಿತರಿದ್ದರು.

ಇತಿಹಾಸ ಸಹಾಯಕ ಪ್ರಾಧ್ಯಾಪಕಿ ಪ್ರೊ.ಕವಿತ, ಸ್ವಾಗತಿಸಿದರು. ಪ್ರೊ.ಸುಧಾರಾಣಿ ಎನ್. ವಂದಿಸಿದರು. ಕು.ಶ್ರುತ ಬಳಗ ತ್ರತೀಯ ಬಿ.ಎ ಪ್ರಾರ್ಥಿಸಿದರು. ಕು.ನಸೀಬಾ, ಕಾವ್ಯಶ್ರೀ ನಿರೂಪಿಸಿದರು.

Related posts

ವಾಣಿ ಕಾಲೇಜಿನಲ್ಲಿ ಆಟಿ ಒಂಜಿ ನೆಂಪು -ಉಪನ್ಯಾಸ ಕಾರ್ಯಕ್ರಮ

Suddi Udaya

ಜಾರಿಗೆಬೈಲಿನಲ್ಲಿ ಕೆ.ಎಮ್.ಜೆ. ವತಿಯಿಂದ “ಪ್ರಜಾ ಭಾರತ” ಸೌಹಾರ್ಧ ಕಾರ್ಯಕ್ರಮ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya

ಮಡಂತ್ಯಾರು: ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿಯಲ್ಲಿ ಯೋಗ ತರಗತಿ

Suddi Udaya

ಕೊಯ್ಯೂರು ಸ.ಪ್ರೌ. ಶಾಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ

Suddi Udaya

ಕೊಯ್ಯೂರು: ಅಕ್ರಮವಾಗಿ ಮದ್ಯ ಮಾರಾಟ: ಬೆಳ್ತಂಗಡಿ ಪೊಲೀಸರಿಂದ ದಾಳಿ

Suddi Udaya
error: Content is protected !!