ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ.ಕೆ.ವಸಂತ ಬಂಗೇರರ ಮುಂದಾಳತ್ವದಲ್ಲಿ ಆರಂಭಗೊಂಡ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ನೀಡಿದ ತಾಲೂಕಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ.
ಈಗಾಗಲೇ ಕಾಲೇಜಿನಲ್ಲಿ ಡಿಸಿಎ, ಕಂಪ್ಯೂಟರ್ ಕೋರ್ಸ್ ಹಾಗೂ ಬ್ಯೂಟಿಷಿಯನ್ ಕೋರ್ಸ್ ಗಳನ್ನು ತೆರೆಯುತ್ತಿದೆ.ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಆ್ಯಂಡ್ ಅಂಕೌಟ್ಸ್ ಸಹಿತ ವಿವಿಧ ಮಾದರಿಯ ಉತ್ತಮ ಕೋರ್ಸ್ಗಳನ್ನು ಪ್ರಾರಂಭಿಸುತ್ತಿದೆ. ವಿದ್ಯಾರ್ಥಿಗಳಿಗೆ ಹಾಗೂ ಇತರ ಎಲ್ಲಾ ವಯೋಮಾನದವರಿಗೆ ಅವಕಾಶ ಕಲ್ಪಿಸಿದ್ದು ಮೂರರಿಂದ ಆರು ತಿಂಗಳಿನ ತರಬೇತಿ ಲಭ್ಯವಿದ್ದು ದಾಖಲಾತಿ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಅಥವಾ 9972514759 / 9845627042 / 9480791134 ಈ ಮೊಬೈಲ್ ನಂಬರ್ ಸಂರ್ಪಕಿಸಬಹುದು ಎಂದು ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಪ್ರೀತಿತಾ ಧರ್ಮವಿಜೇತ್ ತಿಳಿಸಿದ್ದಾರೆ.











