July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ಮಾನವಿಕ ಸಂಘದ ಉದ್ಘಾಟನೆ

ಬೆಳ್ತಂಗಡಿ : ಸ.ಪ್ರ.ದ ಕಾಲೇಜು, ಬೆಳ್ತಂಗಡಿಯಲ್ಲಿ ಮಾನವಿಕ ಸಂಘವನ್ನು ಡಾ.ಶರತ್ ಕುಮಾರ್ ಟಿ.ಕೆ., ನಿವ್ರತ್ತ ಪ್ರಾಂಶುಪಾಲರು, ಸ.ಪ್ರ.ದ ಕಾಲೇಜು ಪುಂಜಾಲಕಟ್ಟೆ, ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಜ್ಞಾನವನ್ನು ಜಾಣ್ಮೆಯಿಂದ ಬಳಸಿಕೊಂಡಾಗ ಅವಕಾಶಗಳು ನಿಮ್ಮದಾಗುತ್ತವೆ. ಶ್ರದ್ಧೆ, ಬದ್ಧತೆಯಿಂದ ಜೀವನದಲ್ಲಿ ಮುನ್ನುಗ್ಗಿದಾಗ ಯಶಸ್ಸು ತನ್ನಿಂದ ತಾನೆ ಬರುತ್ತದೆ. ಜೀವನದಲ್ಲಿ ತಿಳಿಯುವ ಕುತೂಹಲ, ಕೌತುಕ ಕಲಿಕೆಗೆ ಹಾಗೂ ಯಶಸ್ಸಿಗೆ ಪೂರಕ ಎಂದರು.

ಪ್ರೊ.ಮಾರುತಿ ಜಿ ಕ್ರಿಯಾ ಯೋಜನೆ ಬಗ್ಗೆ ಮಾತನಾಡಿದರು. ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ ಮಾನವಿಕ ಸಂಘದ ಸಂಚಾಲಕರು ಪ್ರಾಸ್ತಾವಿಸಿದರು. ಐಕ್ಯೂಎಸಿ ಸಂಚಾಲಕ ಡಾ.ಕುಶಾಲಪ್ಪ ಎಸ್, ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಪ್ರೊ.ಪದ್ಮನಾಭ ಕೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ರಾಧಾಕೃಷ್ಣ ಹೆಚ್.ಬಿ, ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ.ರವಿ ಎಂ.ಎನ್, ಪ್ರೊ.ಸುರೇಶ್ ಡಿ, ಉಪಸ್ಥಿತರಿದ್ದರು.

ಇತಿಹಾಸ ಸಹಾಯಕ ಪ್ರಾಧ್ಯಾಪಕಿ ಪ್ರೊ.ಕವಿತ, ಸ್ವಾಗತಿಸಿದರು. ಪ್ರೊ.ಸುಧಾರಾಣಿ ಎನ್. ವಂದಿಸಿದರು. ಕು.ಶ್ರುತ ಬಳಗ ತ್ರತೀಯ ಬಿ.ಎ ಪ್ರಾರ್ಥಿಸಿದರು. ಕು.ನಸೀಬಾ, ಕಾವ್ಯಶ್ರೀ ನಿರೂಪಿಸಿದರು.

Related posts

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ: ಗುರುವಾಯನಕೆರೆ ಎರ್ಡೂರು ಬಳಿ ‘ಶ್ರೀರಾಮನಗರ’ ನಾಮಫಲಕ ಅನಾವರಣ

Suddi Udaya

ಬಳಂಜ: 85 ವರ್ಷದ ಗಂಗಮ್ಮ ಹೆಗ್ಡೆಯವರಿಂದ ಮತದಾನ

Suddi Udaya

ತೋಟತ್ತಾಡಿ: ದೊರ್ತಾಡಿ ನಿವಾಸಿ ಶಿವಣ್ಣ ಕುಂಬಾರ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಮುಂಡಾಜೆ: ಮೂಲಾರು ದರ್ಖಾಸು ನಿವಾಸಿ ಕಮಲಾ ನಾಯ್ಕ ನಿಧನ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಾವೂರು ಗ್ರಾಮ ಸಮಿತಿಯಿಂದ ಸಿಎಂ ಸಿದ್ಧರಾಮಯ್ಯರಿಗೆ ಮನವಿ

Suddi Udaya
error: Content is protected !!