July 23, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ ಆಟೋ-ಚಾಲಕರ ಸಂಘದ ವತಿಯಿಂದ ಸರ್ಪ ಸಂಸ್ಕಾರ ಪೂಜೆ

ಗೇರುಕಟ್ಟೆ : ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕ, ಮಾಲಕ ಸಂಘದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆ ನಡೆಯಿತು.

ಇತ್ತೀಚೆಗೆ ಪರಪ್ಪು-ಕೊಯ್ಯೂರು ಟಾರು ರಸ್ತೆಯಲ್ಲಿ ನಾಗರಹಾವು ವಾಹನದಡಿಗೆ ಬಿದ್ದು ಸಾವನ್ನಪ್ಪಿತು. ಇದನ್ನು ಗಮನಿಸಿದ ಗೇರುಕಟ್ಟೆ ಸ್ನೇಹ ಸಂಗಮ ಆಟೋ,ಚಾಲಕ, ಮಾಲಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರನ್ನು ಸೇರಿಸಿ ಕೊಂಡು ಸರ್ಪ ಸಂಸ್ಕಾರವನ್ನು ಮಾಡುವುದಾಗಿ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬಂದರು. ಅದರಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವೃತ್ತ ದಾರಿಯಾಗಿ ಚಾಲಕ ವಿನಯ ಗೌಡ ನೇತೃತ್ವದಲ್ಲಿ ಸೆ.12 ರಂದು ಪೂಜೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕೆ., ಮಾಜಿ ಅಧ್ಯಕ್ಷ ವಸಂತ ಶೆಟ್ಟಿ, ಚಾಲಕರಾದ ಗಣೇಶ್ ಕೆ.,ಓಬಯ್ಯ ಗೌಡ ,ತಾರನಾಥ ಬಿ.,ಶೇಖರ ಗೌಡ ಎಮ್.,ರಮೇಶ್‌ ಪೂಜಾರಿ,ಸಂದೀಪ್ ಪಿ.,ಕೀರ್ತಿ,ರೊನಾಲ್ಡೊ ಪಿಂಟೋ ಮತ್ತು ದಿಕ್ಷೀತ್ ಗೌಡ ಉಪಸ್ಥಿತರಿದ್ದರು.

Related posts

ಕಾರಿಂಜ ಮಧ್ವ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಬೆಳ್ತಂಗಡಿಯ ಯುವಕ ಸ್ಥಳದಲ್ಲೆ ಸಾವು

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಒವರಂ ಕ್ರಿಕೆಟ್ ಪಂದ್ಯಾಟ “ರಾಜಕೇಸರಿ ರತ್ನ ಟ್ರೋಫಿ”

Suddi Udaya

ಜಿಲ್ಲಾ ಒಕ್ಕಲಿಗರ ಗೌಡರ ಸೇವಾ ಸಂಘಕ್ಕೆ ಬೆಳ್ತಂಗಡಿಯಿಂದ ಐದು ಜನ ಆಯ್ಕೆ

Suddi Udaya

ನಿವೃತ್ತ ಪಿಡಿಓ ಪೂವಪ್ಪ ಬಂಗೇರ ನಿಧನ

Suddi Udaya

ಭಾರತೀಯ ಭೂಸೇನೆ ತರಬೇತಿ ಮುಗಿಸಿ ಕಳೆಂಜಕ್ಕೆ ಆಗಮಿಸಿದ ಪುಷ್ಪರಾಜ್ ರವರಿಗೆ ಕೊಕ್ಕಡದಲ್ಲಿ ಸ್ವಾಗತ

Suddi Udaya

ನಾಳೆ(ಜೂ.21) ನೀಟ್ ಮರು ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 5,570 ಅಭ್ಯರ್ಥಿಗಳು

Suddi Udaya
error: Content is protected !!