ಗೇರುಕಟ್ಟೆ : ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕ, ಮಾಲಕ ಸಂಘದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆ ನಡೆಯಿತು.

ಇತ್ತೀಚೆಗೆ ಪರಪ್ಪು-ಕೊಯ್ಯೂರು ಟಾರು ರಸ್ತೆಯಲ್ಲಿ ನಾಗರಹಾವು ವಾಹನದಡಿಗೆ ಬಿದ್ದು ಸಾವನ್ನಪ್ಪಿತು. ಇದನ್ನು ಗಮನಿಸಿದ ಗೇರುಕಟ್ಟೆ ಸ್ನೇಹ ಸಂಗಮ ಆಟೋ,ಚಾಲಕ, ಮಾಲಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರನ್ನು ಸೇರಿಸಿ ಕೊಂಡು ಸರ್ಪ ಸಂಸ್ಕಾರವನ್ನು ಮಾಡುವುದಾಗಿ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬಂದರು. ಅದರಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವೃತ್ತ ದಾರಿಯಾಗಿ ಚಾಲಕ ವಿನಯ ಗೌಡ ನೇತೃತ್ವದಲ್ಲಿ ಸೆ.12 ರಂದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕೆ., ಮಾಜಿ ಅಧ್ಯಕ್ಷ ವಸಂತ ಶೆಟ್ಟಿ, ಚಾಲಕರಾದ ಗಣೇಶ್ ಕೆ.,ಓಬಯ್ಯ ಗೌಡ ,ತಾರನಾಥ ಬಿ.,ಶೇಖರ ಗೌಡ ಎಮ್.,ರಮೇಶ್ ಪೂಜಾರಿ,ಸಂದೀಪ್ ಪಿ.,ಕೀರ್ತಿ,ರೊನಾಲ್ಡೊ ಪಿಂಟೋ ಮತ್ತು ದಿಕ್ಷೀತ್ ಗೌಡ ಉಪಸ್ಥಿತರಿದ್ದರು.











