ಗುರುವಾಯನಕೆರೆ: ಇಲ್ಲಿನ ಬಸ್ ನಿಲ್ದಾಣದ ಬಳಿ ಇರುವ ಶ್ರೀ ವರದ ಪಾಂಡುರಂಗ ವಿಠಲ ಮಂದಿರದ ಕಾಣಿಕೆ ಡಬ್ಬಿಯ ಕೀಲುಗಳ (RIBIT OF HINGES) ಮೊಳೆಗಳನ್ನು ತುಂಡರಿಸಿ ಚಿಲ್ಲರೆ ಹಣ ಕಳವು ಮಾಡಿರುವುದು ಕಂಡು ಬಂದಿದೆ.
ಕೆಲ ದಿನದ ಹಿಂದೆ ಕಾಣಿಕೆ ಡಬ್ಬಿಯ ಹಣವನ್ನು ಆಡಳಿತ ಮಂಡಳಿಯವರು ತೆಗೆದಿರುವುದರಿಂದ ಹೆಚ್ಚಿನ ಹಣ ಕಳವು ಮಾಡಲು ಸಾಧ್ಯವಾಗಿಲ್ಲ. ಕಾಣಿಕೆ ಡಬ್ಬಿಯ ಬೀಗ ಹಾಗೂ ಕಾಣಿಕೆ ಡಬ್ಬಿಯನ್ನು ತೆಗೆಯದೆ ಹಾಕಿದ ಬೀಗ ಹಾಗೆಯೇ ಇದೆ ಎಂದು ಆಡಳಿತ ಅಧ್ಯಕ್ಷರಾದ ವಿಶ್ವೇಶ್ ಕಿಣಿ ತಿಳಿಸಿರುತ್ತಾರೆ. ಈ ಬಗ್ಗೆ
ಆರಕ್ಷಕ ಠಾಣೆಗೆ ಯಾವುದೇ ದೂರು ನೀಡಿಲ್ಲ.






