ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಸಿ.ಕೆ ಚಂದ್ರ ಅವರು ಸೌಜನ್ಯ ಅವರ ತಾಯಿ ಕುಸುಮಾವತಿ ವಿರುದ್ಧ ಎಸ್ಐಟಿಗೆ ಇಂದು ದೂರು ನೀಡಿದ್ದಾರೆ.
ಕುಸುಮಾವತಿ ಅವರ ಪತಿ ಚಂದಪ್ಪ ಗೌಡ ಅವರು ಅಸೌಖ್ಯದಿಂದ ನಿಧನರಾಗಿದ್ದು, ಇತ್ತಿಚೇಗೆ ಕುಸುಮಾವತಿಯವರು ತಮ್ಮ ಪತಿ ಚಂದಪ್ಪ ಗೌಡ ಅವರನ್ನು ‘ಸ್ಟೋ ಪಾಯ್ಸನ್’ನಿಂದ ಕೊಲ್ಲಲಾಗಿದೆ ಎಂದು ಕೆಲವು ಯೂಟ್ಯೂಬ್ ಚಾನೆಲ್ಗಳಿಗೆ ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಮಗಳ ಸಾವಿನಲ್ಲಿ ಹೆಸರಿಸಿದ್ದ ವ್ಯಕ್ತಿಗಳನ್ನು ಮತ್ತು ಧರ್ಮಸ್ಥಳದ ಇತರರನ್ನು ಆಧಾರರಹಿತ ಹೇಳಿಕೆಗಳೊಂದಿಗೆ ಪರೋಕ್ಷವಾಗಿ ಜೋಡಿಸಲು ಪ್ರಯತ್ನಿಸಿದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತಾನು ಎಸ್ ಐಟಿ ಗೆ ದೂರು ನೀಡಿದ್ದು, ಅದನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.











