ಬೆಳ್ತಂಗಡಿ : ಕ್ಯಾಂಪ್ಕೊ ನಿಯಮಿತ ಮಂಗಳೂರು ಇದರ “ಸಾಂತ್ವನ” ಯೋಜನೆಯಡಿ ಬೆಳ್ತಂಗಡಿ ಶಾಖೆಯ ಸಕ್ರಿಯ ಸದಸ್ಯರಾದ, ವಸಂತ ಪಟವರ್ಧನ್ ಮುಂಡಾಜೆ, ಇವರ ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ಸಹಾಯಧನದ ಮೊತ್ತ, ರೂ 2,00,000/- ನ್ನು ಬೈಕಂಪಾಡಿ ವಲಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೋಟ್ಯಾನ್ ಅವರು ವಸಂತ ಪಟವರ್ಧನ್ ರ ಮನೆಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೊ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಶ್ರೀಕೃಷ್ಣ ಕೆ. ಎಸ್, ಮುಂಡಾಜೆ ಪಾಕ್ಸ್ ಸಿಇಒ ಪ್ರಸನ್ನ ಪರಾಂಜಪೆ ಹಾಗೂ ಸದಸ್ಯ ಗಣೇಶ ಪಟವರ್ಧನ್ ಉಪಸ್ಥಿತರಿದ್ದರು.











