ಬೆಳ್ತಂಗಡಿ: ಮುಗ್ಗಗುತ್ತಿನ ಮನೆಯಲ್ಲಿ ತೆನೆ ತುಂಬಿಸುವುದರ ಮುಖಾಂತರ ನವರಾತ್ರಿ ಪೂಜೆಯನ್ನು ಸೆ.22 ರಂದು ಆರಂಭಿಸಲಾಯಿತು.

ಗುತ್ತಿನ ಆಡಳಿತ ಮೊಕ್ತೇಸರ ಪೀತಾಂಬರ ಹೆರಾಜೆ, ಅಧ್ಯಕ್ಷ ಹರೀಶ್ ಕುಮಾರ್, ಶ್ರೀಮತಿ ಶಾರದಾ ಕೃಷ್ಣ, ಡಾ. ರಾಜಾರಾಮ್, ದಿನೇಶ್ ಪಿದಮ್ ಮಲೆ, ಮುಂತಾದವರು ಹಾಜರಿದ್ದು ಪ್ರಶಾಂತ ಶಾಂತಿ, ಪ್ರಶಾಂತ ಪೂಜಾರಿ ಕಂಡೆತ್ಯಾರು , ಕೀರ್ತಿ ಬಂಗೇರ ಮುಂತಾದವರು ಪೂಜಾ ವಿಧಿ ವಿಧಾನದಲ್ಲಿ ಸಹಕರಿಸಿದರು.











