ಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಸೆ.25 ರಂದು ಉಜಿರೆಯ ಶಾರದಾ ಮಂಟಪದಲ್ಲಿ ಡಾ.ಎಸ್.ಎಲ್.ಬೈರಪ್ಪರವರಿಗೆ ನುಡಿನಮನ ಕಾರ್ಯಕ್ರಮವು ನಡೆಯಿತು.

ಭೈರಪ್ಪನವರ ಬದುಕು- ಬರಹ- ಬವಣೆ ಬಗ್ಗೆ ಶಿವಪ್ರಸಾದ್ ಸುರ್ಯ ನುಡಿ ನಮನವನ್ನು ಸಲ್ಲಿಸಿದರು.
ಶ್ರೀಮತಿ ವಸಂತಿ ಕುಳಮರ್ವ ಶಾರದಾ ಸ್ತುತಿ ಗೈದು, ಪ್ರೊ.ಗಣಪತಿ ಭಟ್ ಕುಳಮರ್ವ ಸ್ವಾಗತಿಸಿ, ರಾಮಕೃಷ್ಣ ಭಟ್ ಬದನಾಜೆ ಧನ್ಯವಾದವಿತ್ತರು. ಶ್ರೀಮತಿ ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು.











