ಬೆಳ್ತಂಗಡಿ: ಗುಂಡೂರಿ ಕಡೆಯಿಂದ ಪಿಕ್ ಅಪ್ ವಾಹನದಲ್ಲಿ ದಿನೇಶ್ ಎಂಬಾತನು ಮರಳು ಸಾಗಾಟ ಮಾಡುತ್ತಿರುವುದನ್ನು ವೇಣೂರು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡ ಪ್ರಕರಣ ವರದಿಯಾಗಿದೆ.
ಹೆಚ್ ಸಿ ಕೃಷ್ಣರವರು ಪಿಸಿ ಸಂತೋಷ್ ರವರೊಂದಿಗೆ ಇಲಾಖಾ ಬೈಕ್ನೊಂದಿಗೆ ಹೋಗುತ್ತಿರುವ ಸಂದರ್ಭದಲ್ಲಿ ಪಿಕ್ ಅಪ್ ವಾಹನ ಚಾಲಕ ದಿನೇಶ್ ಎಂಬಾತನು ಪಿಕ್ ಅಪ್ ವಾಹನ ನಿಲ್ಲಿಸಿ ಓಡಿ ತಪ್ಪಿಸಿಕೊಂಡಿದ್ದು, ಪಿಕ್ ಅಪ್ ವಾಹನ ಪರಿಶೀಲಿಸಲಾಗಿ ಸುಮಾರು ರೂ.6 ಸಾವಿರ ಮೌಲ್ಯದ ಒಂದು ಯುನಿಟ್ ನಷ್ಟು ಮರಳು ಪತ್ತೆಯಾಗಿದೆ.
ಆರೋಪಿತನು ಎಲ್ಲಿಂದಲೋ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಆತನ ಬಾಬ್ತು ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡಿ ಸರರ್ಕಾರದ ರಾಜಸ್ವಕ್ಕೆ ನಷ್ಟ ಉಂಟು ಮಾಡಿದ್ದು ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











