ಮಿತ್ತಬಾಗಿಲು : ಇಲ್ಲಿಯ ಗುಂಡೀರು ವಿನಯಚಂದ್ರ ರವರ ಮನೆಗೆ ತೆಂಗಿನ ಮರ ಬಿದ್ದು ಅಪಾರ ಹಾನಿಯಾದ ಘಟನೆ ಸೆ. 28 ರಂದು ನಡೆದಿದೆ.


ಸುರಿದ ಭಾರೀ ಗಾಳಿ ಮಳೆಯಿಂದಾಗಿ ತೆಂಗಿನ ಮರ ಬಿದ್ದು ಮನೆಯ ಅಡುಗೆ ಕೋಣೆ ಹಾಗೂ ಶೌಚ್ಛ ಗೃಹಕ್ಕೆ ಹಾನಿಯಾಗಿದ್ದು ಸಿಮೆಂಟ್ ಸೀಟ್ ಗಳು ಹುಡಿಯಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿಯವರು, ಗ್ರಾ.ಪಂ ಅಧ್ಯಕ್ಷ ವಿನಯಚಂದ್ರ, ಪಿಡಿಒ ಮೋಹನ್ ಬಂಗೇರ ಭೇಟಿ ನೀಡಿದರು.











