22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳೆದುಕೊಂಡಿದ್ದ ಚಿನ್ನವನ್ನು ಮರಳಿ ದಂಪತಿಗಳಿಗೆ ಹಸ್ತಾಂತರಿಸಿದ ಲಾಡ್ಜ್ ಮಾಲೀಕ

ಬೆಳ್ತಂಗಡಿ : ಲಾಡ್ಜ್ ನಲ್ಲಿ ರೂಂ ಮಾಡಿದ್ದ ದಂಪತಿಗಳು ಕಳೆದುಕೊಂಡಿದ್ದ ಚಿನ್ನವನ್ನು ಲಾಡ್ಜ್ ಸಿಬ್ಬಂದಿ ಹುಡುಕಿ ಮತ್ತೆ ವಾರಿಸುದಾರರಿಗೆ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಅಖಿಲ್ ಶೆಟ್ಟಿ ಮಾಲೀಕತ್ವದ ಪಾರಿಜಾತ ಹೆಸರಿನ ಲಾಡ್ಜ್ ಗೆ ಸೆ.29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯಕ್ಕೆ ಹೋಗಲು ಆಂಧ್ರಪ್ರದೇಶ ಮೂಲದ ಶಿವಕುಮಾರ್ ಮತ್ತು ಆತನ ಪತ್ನಿ ರೂಂ ಮಾಡಿದ್ದರು. ಆದ್ರೆ ಸೆ.30 ರಂದು ರೂಂ ಚೆಕ್ ಓಟ್ ಮಾಡುವಾಗ ಪತ್ನಿಯ 20 ಗ್ರಾಂ ತೂಕದ ಚಿನ್ನವನ್ನು ರೂಂ ನಲ್ಲಿ ಕಳೆದುಕೊಂಡಿದ್ದಾರೆ. ಯಾವ ಕಡೆ ಹುಡುಕಾಟ ನಡೆಸಿದ್ರೂ ಚಿನ್ನ ಪತ್ತೆಯಾಗಿರಲಿಲ್ಲ ಕೊನೆಗೆ ಚಿನ್ನವನ್ನು ಹುಡುಕಿ ವಾಪಸ್ ಕೊಡುವ ಜವಾಬ್ದಾರಿ ನಮ್ಮದು ಎಂದು ಲಾಡ್ಜ್ ಮಾಲೀಕ ಅಖಿಲ್ ಶೆಟ್ಟಿ ದಂಪತಿಗಳಿಗೆ ಭರವಸೆ ನೀಡಿ ಕಳುಹಿಸಿದ್ದರು.

ದಂಪತಿಗಳು ತಂಗಿದ್ದ ರೂಂ ಸಿಬ್ಬಂದಿಗಳು ಎಲ್ಲಾ ಕಡೆ ಹುಡುಕಾಟ ಮಾಡಿದ್ದರೂ ಪತ್ತೆಯಾಗದಿದ್ದಾಗ ಕೊನೆಗೆ ಯಾರಿಗೂ ರೂಂ ನೀಡದೆ ಲಾಕ್ ಮಾಡಿ ಇಟ್ಟಿದ್ದರು. ದಂಪತಿಗಳು ಉಪಯೋಗಿಸಿದ್ದ ಬೆಡ್ ಶೀಟ್ ಮತ್ತು ದಿಂಬು ಕವರ್ ಗಳನ್ನು ವಾಶ್ ಮಾಡಲು ಕಳುಹಿಸಿದ್ದರು. ಅ.1 ರಂದು ವಾಶ್ ಮಾಡಲು ಕಳುಹಿಸಿದ್ದ ದಿಂಬು ಕವರ್ ಒಳಗೆ ಚಿನ್ನ ಇರುವುದನ್ನು ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ. ತಕ್ಷಣ ಕರೆಮಾಡಿ ದಂಪತಿಗಳನ್ನು ಲಾಡ್ಜ್ ಗೆ ಕರೆಸಿ ವಿಚಾರ ಹೇಳಿದಾಗ ರಾತ್ರಿ ಮಲಗುವಾಗ ಚಿನ್ನವನ್ನು ದಿಂಬು ಪಕ್ಕ ಇಟ್ಟಿದ್ದು ಅದು ದಿಂಬು ಕವರ್ ಒಳಗಡೆ ಸೇರಿದೆ ಎಂದಿದ್ದಾರೆ.

ಕೊನೆಗೂ ಸುಮಾರು 2 ಲಕ್ಷ ಮೌಲ್ಯದ 20 ಗ್ರಾಂ ಚಿನ್ನವನ್ನು ಕಳೆದುಕೊಂಡಿದ್ದ ಆಂದ್ರಪ್ರದೇಶದ ದಂಪತಿಗಳಿಗೆ ಚಿನ್ನವನ್ನು ಮರಳಿ ಹಸ್ತಾಂತರಿಸಿ ಪಾರಿಜಾತ ಇನ್ ಲಾಡ್ಜ್ ಮಾಲೀಕ ಅಖಿಲ್ ಶೆಟ್ಟಿ ಮತ್ತು ವೀಕ್ಷಿತ್ ಶೆಟ್ಟಿ ಮಾನವೀಯತೆ ಮೆರೆದಿದ್ದಾರೆ.

Related posts

ಶಿವಮೊಗ್ಗದಲ್ಲಿ ನಡೆದ ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಕು. ಅದ್ವಿತಿ ರಾವ್ ದ್ವಿತೀಯ ಸ್ಥಾನ

Suddi Udaya

ನಾರಾವಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕುವೆಟ್ಟು ಜನಸ್ಪಂದನ ಸಭೆ

Suddi Udaya

ಪಶ್ಚಿಮ ಘಟ್ಟದ ಎಲ್ಲ ಅರಣ್ಯ ಒತ್ತುವರಿ ಮತ್ತು ಅನಧಿಕೃತ ಹೋಮ್ ಸ್ಟೇ, ಬಡಾವಣೆ, ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಅರಣ್ಯ ಸಚಿವರಿಂದ ಖಡಕ್ ಸೂಚನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ-ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಉಜ್ವಲ ಮತ್ತು ಭವಿಷ್ಯ ಮಕ್ಕಳ ಸಮಿತಿ ರಚನೆ

Suddi Udaya

ಬರೆಂಗಾಯ ಸ.ಉ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ

Suddi Udaya
error: Content is protected !!