ಶಿರ್ಲಾಲು ; ರಿಕ್ಷಾ ಚಾಲಕ -ಮಾಲಕ ಸಂಘ ಶಿರ್ಲಾಲು ಇವರಿಂದ ಅ.1ರಂದು ಆಯುಧ ಪೂಜೆಯು ರಿಕ್ಷಾ ಪಾರ್ಕಿಂಗ್ ನಲ್ಲಿ ಲೋಕನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ರಾವ್ ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ಜರುಗಿತು.

ಈ ವೇಳೆ ಅರ್ಚಕ ಸೂರ್ಯನಾರಾಯಣ ರಾವ್, ಹಿರಿಯ ರಿಕ್ಷಾ ಚಾಲಕ ಹಮೀದ್, ಜೀವರಕ್ಷಕ ಅಂಬುಲೆನ್ಸ್ ಚಾಲಕ ಅಶ್ವಥ್ ಸುಲ್ಕೇರಿಮೊಗ್ರು ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶೋಕ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸಾದ್ ನಲ್ಲಾರ್ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.











