ಧರ್ಮಸ್ಥಳ: ವಿಜಯದಶಮಿ ದಿನವಾದ ಅ.2 ರಂದು ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆನೆಯನ್ನು ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ತರಲಾಯಿತು.
ಬೀಡಿನ ಬಸದಿಯಲ್ಲಿಯೂ ವಿಶೇಷ ಪೂಜೆ ಬಳಿಕ ಮಧ್ಯಾಹ್ನ ಹೊಸ ಅಕ್ಕಿ ಊಟ ನಡೆಯಿತು.
ಹೆಗ್ಗಡೆಯವರು, ಕುಟುಂಬಸ್ಥರು, ಬಂಧುಗಳು ಹಾಗೂ ಊರಿನವರು ಭಾಗವಹಿಸಿದರು.











