ಮಡoತ್ಯಾರು ನೇಸರ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ ಯನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು
ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದೇವಕಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಒಕ್ಕೂಟ ಅಧ್ಯಕ್ಷರು, ಹಾಗೂ ವಲಯ ಮೇಲ್ವಿಚಾರಕರು ವೀಣಾ ಶ್ರೀ ಹಾಗೂ ಎಲ್ಲಾ ಗಣ್ಯರು ಸಭಾ ಕಾರ್ಯ ಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು, ಕಾರ್ಯ ದರ್ಶಿ ಮೋಹಿನಿ ಯವರು ವಾರ್ಷಿಕ ವರದಿ ಹಾಗೂ ಚಂದ್ರಕಲಾ ಜಮಾ ಮತ್ತು ಖರ್ಚು ಮಂಡಿಸಿ ಅನುಮೋದನೆ ಪಡೆಯಲಾಯಿತು. ಬಸವೇಶ್ವರ ಶ್ರೀ ಶಕ್ತಿ ಸಂಘದ ಸದಸ್ಯರಾದ ಶ್ರೀಮತಿ ಮಮತ ಇವರು ಸಿಐಎಫ್ ಸಾಲ ಪಡೆದು ಸ್ವ ಉದೋಗ ಟೈಲರಿಂಗ್ ಹಾಗೂ ರೇಗ್ಸಿನ್ ಬ್ಯಾಗ್ ಪ್ರಾರಂಭಿಸಿದ್ದುಒಕ್ಕೂಟದಲ್ಲಿ ಚಾಲನೆ ನೀಡಲಾಯಿತು.
ವಲಯ ಮೇಲ್ವಿಚಾರಕರು ವೀಣಾ ಶ್ರೀ ಸಂಜೀವಿನಿ ಯೋಜನೆ ಉದ್ದೇಶ ಹಾಗೂ ಮಹಿಳೆಯರ ಸ್ವಾವಲಂಬನೆ ಜೀವನ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು, ಪಂಚಾಯತ್ ಅಧ್ಯಕ್ಷರು ಹಿತವವಚನ ನುಡಿದರು, ಒಕ್ಕೂಟ ಅಧ್ಯಕ್ಷರು ಅಧ್ಯಕ್ಷತೆಯ ಮಾತನ್ನು ಆಡಿದರು. ಬೇಬಿ ಸ್ವಾಗತಿಸಿದರು. ಪಶು ಸಖಿ ಸಂದ್ಯಾ ಧನ್ಯವಾದವಿತ್ತರು. ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಮಾದಕ ವ್ಯಸನ ಮುಕ್ತ ಪ್ರತಿಜ್ಞಾ ಮಾಡಿದರು ಹಾಗೂ ಲಿಂಗತ್ವ ದೌರ್ಜನ ದ ಬಗ್ಗೆ ಅರಿವು ಕಾರ್ಯ ಕ್ರಮ ಮಾಡಲಾಯಿತು.











