22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

22 ವರ್ಷ ಭಾರತಮಾತೆಯ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಅಶೋಕ್ ಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

ಬೆಳ್ತಂಗಡಿ: ‘ಭಾರತಮಾತೆಯ ಸೇವೆಗೆ ತನ್ನನೇ ತಾನು ಸಮರ್ಪಿಸಿ 22 ವರ್ಷದ ನಿಷ್ಠೆ, ನಿಸ್ವಾರ್ಥದ ಸೇವೆಯನ್ನು ನೀಡಿ ನಿವೃತ್ತಿಗೊಂಡು ಹುಟ್ಟೂರಿಗೆ ಆಗಮಿಸಿದ ಲಾಯಿಲ ಗ್ರಾಮದ ವಿವೇಕಾನ೦ದ ನಗರದ ನಿವಾಸಿ ಹೆಮ್ಮೆಯ ಯೋಧರಾದ ಅಶೋಕ್ ಕುಮಾರ್ ರವರನ್ನು ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಮೋಹನ್ ಕಲ್ಮಂಜ, ಮಾಜಿ ಸೈನಿಕ ತಂಗಚ್ಚನ್, ಯುವ ವೇದಿಕೆ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಮತ್ತು ಪದಾಧಿಕಾರಿಗಳು, ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಲಾಯಿಲ, ಹರಿಕೃಷ್ಣ, ಅರವಿಂದ, ಮಹೇಶ್, ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ ಪದಾಧಿಕಾರಿಗಳು, ಅಶೋಕ್ ಕುಮಾರ್ ರವರ ತಂದೆ ಕೃಷ್ಣಪ್ಪ ಗೌಡ, ತಾಯಿ ವಾರಿಜ, ಪತ್ನಿ ಶಶಿಕಲಾ, ಮಕ್ಕಳಾದ ಸಾಕ್ಷಿ, ಸಾತ್ವಿಕ್ ಬಂಧುಮಿತ್ರರು ಉಪಸ್ಥಿತರಿದ್ದರು.

ಇವರು 23-09-2003ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಬೆ೦ಗಳೂರು, ಜಮ್ಮು, ಪಟ್ನಾಕೋಟ್, ಕೊಲ್ಕತ್ತ, ಅಸ್ಸಾಂ, ರಾಜಸ್ತಾನ ಮತ್ತು ಪುಣೆಯಲ್ಲಿ ಒಟ್ಟು 22 ವರ್ಷಗಳ ಕಾಲ ಭಾರತಾಂಬೆಯ ಸೇವೆಯನ್ನು ಸಲ್ಲಿಸಿ ಇದೀಗ ಸೇವಾ ನಿವೃತ್ತಿಯನ್ನು ಹೊಂದಿರುತ್ತಾರೆ.

Related posts

ಇಂದಬೆಟ್ಟು: ಕಲ್ಲಾಜೆ ಗಂಪದಕೋಡಿ ನಿವಾಸಿ ವಜ್ರಾಕ್ಷ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಪ್ರಶಸ್ತಿ

Suddi Udaya

ಕ್ಯಾಂಪ್ಕೊ “ಸಾಂತ್ವನ” ಯೋಜನೆಯಡಿ ಚಿಕಿತ್ಸಾ ನೆರವು

Suddi Udaya

ಅಳದಂಗಡಿ ಮೆಸ್ಕಾಂ ಇಲಾಖೆಯಲ್ಲಿ ಆಯುಧ ಪೂಜೆ

Suddi Udaya

ಉಜಿರೆಯಲ್ಲಿ ಗಣೇಶ್ ಹೆಲ್ಮೆಟ್ಸ್ ಶುಭಾರಂಭ

Suddi Udaya

ಡಿ.17: ನಾರಾವಿ ಎನ್ ಎಸ್ ಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!