ಧರ್ಮಸ್ಥಳ : ಕುಡುಮ ಶ್ರೀ ಟೈಗರ್ಸ್ ನಡುಗುಡ್ಡೆ ಧರ್ಮಸ್ಥಳ ಇದರ ಎಂಟನೇ ವರ್ಷದ ಹುಲಿ ಕುಣಿತ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.

ಈ ವೇಳೆ 10 ಜನ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯಾರ್ಥವಾಗಿ ಸುಮಾರು ಒಂದು ಲಕ್ಷದವರೆಗೆ 10 ಯೋಜನೆಗಳನ್ನ ನೀಡಿದೆ ಹಾಗೂ 10 ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಾರ್ಥವಾಗಿ ಸುಮಾರು 40 ಸಾವಿರದವರೆಗೆ ವಿದ್ಯಾನಿಧಿಯನ್ನು ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಖ್ಯಾತ ವಕೀಲರು ನಾರಾಯಣಸ್ವಾಮಿ ಬೆಂಗಳೂರು ಶ್ರೀ ಮಂಜು ಬಾಣಗೆರಾ ಬೆಂಗಳೂರು, ಖ್ಯಾತ ಚಲನಚಿತ್ರ ನಟ ಜೆಪಿ ತುಮ್ಮಿನಾಡು, ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್,
ಟಿವಿ ವಿಕ್ರಮದ ನಿರ್ದೇಶಕ ಹಾಗೂ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆ, ಎಸ್ ಡಿ ಎಮ್ ಐಟಿ ವಿಭಾಗದ ಮುಖ್ಯಸ್ಥ ಪೂರನ್ ವರ್ಮ, ಸಮಾಜಸೇವಕ ಮಣಿ ಬೆಂಗಳೂರು, ಸಮಾಜ ಸೇವಕ ಮಂಜು ಕೆಆರ್ ಪುರಂ, ಹಿಂದೂ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ, ಬೆಳ್ತಂಗಡಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಉದ್ಯಮಿಗಳು ಸುಧಾಕರ್ ಗೌಡ ಧರ್ಮಸ್ಥಳ, ಚಂದನ್ ಪ್ರಸಾದ್ ಕಾಮತ್ , ದಿನೇಶ್ ರಾವ್, ಸಂದೇಶ ರಾವ್ ಉಪಸ್ಥಿತರಿದ್ದರು.











