24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಂ. ಬಿ.ಎಡ್ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ವಾಲ್ಮೀಕಿ ಜಯಂತಿಯ ಕುರಿತು ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಅಕ್ಷಿತಾ ಮಾತನಾಡಿ “ ಶ್ರೀ ರಾಮಾಯಣ ಗ್ರಂಥದ ಕರ್ತ ಆದಂತಹ ಆದಿಕವಿ ವಾಲ್ಮೀಕಿಯನ್ನು ಉದ್ದೇಶಿಸಿ ಮಹಾನ್ ಮಹರ್ಷಿಯಾಗಿ ಜಗತ್ತಿನ ಶ್ರೇಷ್ಠ ಗ್ರಂಥ ರಾಮಾಯಣವನ್ನು ಬರೆದವರು ರತ್ನಾಕರ ಎಂದು ವರ್ಣಿಸಿದರು. ಒಬ್ಬ ಸಾಮಾನ್ಯ ಬೇಡನಾಗಿದ್ದಂತಹ ರತ್ನಾಕರನು ಮುಂದೆ ಮಹರ್ಷಿ ವಾಲ್ಮೀಕಿಯಾಗಿ ಬದಲಾವಣೆ ಹೊಂದಿರುವ ಶ್ರೇಷ್ಠ ವ್ಯಕ್ತಿ. ಶ್ರೀ ರಾಮನನ್ನು ಆರಾಧ್ಯ ದೈವನನ್ನಾಗಿ ಮಾಡಿಕೊಂಡು ರಾಮನ ಗುಣಗಾನವನ್ನು ಶ್ರೀ ರಾಮಾಯಣ ಗ್ರಂಥದ ಮೂಲಕ ತಿಳಿಸಿಕೊಟ್ಟವರು. ಇದು ಮಾನವ ಕುಲಕ್ಕೆ ಇವರು ನೀಡಿರುವ ಕೊಡುಗೆಯಾಗಿದೆ. ವಾಲ್ಮೀಕಿಯವರ ಆದರ್ಶ, ಮೌಲ್ಯ, ಜೀವನದಲ್ಲಿ ಪಾಲಿಸಿದ ತಾಳ್ಮೆ, ಜ್ಞಾನ, ತಪಸ್ಸು, ದೈವಿಕ ಪ್ರೇರಣೆಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಜಾಸ್ಮಿನ್ ರೇಶ್ಮಾ ಕ್ರಾಸ್ತ ಇವರು ಮಾತನಾಡುತ್ತಾ “ ಜೀವನದಲ್ಲಿ ಯಾರೇ ಆಗಿದ್ದರೂ ತಪುö್ಪಗಳನ್ನು ಬಿಟ್ಟು ಒಳ್ಳೆಯ ದಾರಿಗೆ ಬಂದರೆ ಅವರು ಜಗತ್ತಿಗೆ ಮಾದರಿಯಾಗುತ್ತಾರೆ. ವಾಲ್ಮೀಕಿ ಬರೆದ ರಾಮಾಯಣ ಕೇವಲ ಕಥೆಯಲ್ಲ, ಅದು ಸತ್ಯ, ಧರ್ಮ, ಕರುಣೆ, ಧೈರ್ಯ, ಸೇವೆ ಮತ್ತು ಆದರ್ಶದ ಜೀವನವನ್ನು ಕಲಿಸುವ ಮಾರ್ಗದರ್ಶಕ ” ಎಂದರು. ವೇದಿಕೆಯಲ್ಲಿ ವಿದ್ಯಾರ್ಥಿ ಉಪನಾಯಕಿ ಸಾಯಿಧೃತಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಹಾಗೂ ಪ್ರಥಮ ಮತ್ತು ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಕಾವ್ಯಶ್ರೀ ಶೆಟ್ಟಿ ಸ್ವಾಗತಿಸಿ, ಯಶಸ್ವಿನಿ ವಂದಿಸಿ, ಚೈತನ್ಯ ಅತಿಥಿ ಪರಿಚಯಿಸಿ, ಇಂದುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಮಾಯಾ ಒಕ್ಕೂಟದ ಮೈಕ್ರೋ ಬಚತ್ ಪಾಲಿಸಿಯಿಂದ ಮಂಜೂರಾದ ರೂ.2 ಲಕ್ಷ ಸಹಾಯಧನ ಹಸ್ತಾಂತರ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ ಪದ್ಮನಾಭ ಮಾಣಿಂಜರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

Suddi Udaya

ಚಿನ್ನವನ್ನು ತೊಳೆದುಕೊಡುವುದಾಗಿ ಹೇಳಿದಾತ ಸರದೊಂದಿಗೆ ಪರಾರಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

Suddi Udaya

ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ನಿಕಟಪೂರ್ವ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ಆಯ್ಕೆ

Suddi Udaya

ಜ್ವರದಿಂದ ಬಳಲಿ ಗಂಡಿಬಾಗಿಲಿನ ಯುವತಿ ಸಾವು

Suddi Udaya
error: Content is protected !!